ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ‌ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ತಳಿಸಿದ ವೀಡಿಯೋ ಬುದ್ಧಿವಂತರ ಜಿಲ್ಲೆಯೇ ತಲೆ ತಗ್ಗಿಸುವಂತೆ ಆಗಿದೆ – ಗಣೇಶ್ ಕೆ. ನೆಲ್ಲಿಬೆಟ್ಟು

0
246

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಕಾರಣವೇನೇ ಇರಲಿ, ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಈ ಪರಿಯಾಗಿ ಒಬ್ಬ ಮಹಿಳೆಯನ್ನು ತಳಿಸುತ್ತಿರುವುದು ಅದು ಕರ್ನಾಟಕದಲ್ಲಿ ಅನ್ನುವುದು ನಿಜಕ್ಕೂ ನಾಚಿಕೆ ತರುವಂತಹದು. ಈ ಮಹಿಳೆ ಅಪರಾಧ ಮಾಡಿದ್ದೆ ಆಗಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಪೋಲಿಸ ಇಲಾಖೆ ಕಾನೂನಿನ ವ್ಯವಸ್ಥೆ ಎಲ್ಲವೂ ಇದೆ. ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಯಾರು ಸಹಿಸುವುದಿಲ್ಲ. 20 ವರ್ಷಗಳ ಹಿಂದೆ ಮಲ್ಪೆಯಲ್ಲಿ ನಡೆದ ಅಮಾನವೀಯ ಕೃತ್ಯ ಹಾಜಿಯಬ್ಬ, ಹಸನಬ್ಬರ ಘಟನೆ ನೆನಪಿಗೆ ಬಂತು. ವಿಶೇಷವೆಂದರೆ ಅಂದಿನ ಘಟನೆಯ ಆರೋಪಿ ಇಂದು ಘಟನೆ ನಡೆದ ಇದೆ ಕ್ಷೇತ್ರದ ಜನನಾಯಕ. ನಮಗೆ ಉತ್ತರ ಪ್ರದೇಶದ ಮಾದರಿ ಬೇಕೆನ್ನುತ್ತಿದ್ದರು. ಈಗ ಉಡುಪಿ ಮಲ್ಪೆಯಲ್ಲಿ ಇದೆ ಆರಂಭವಾಯಿತಲ್ಲವೇ.  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ, ಉಪಮುಖ್ಯಮಂತ್ರಿಗಳಾದ ಡಿ. ಕೆ.ಶಿವಕುಮಾರ್ ರವರೇ ದಯವಿಟ್ಟು ಈ ಘಟನೆ ಕುರಿತು ಮಾಹಿತಿ ತಿಳಿದು ಕೊಂಡು ತಪ್ಪಿತಸ್ಥರಿಗೆ ಶೀಘ್ರ ಕಠಿಣ ಶಿಕ್ಷೆ ನೀಡಲು ಸೂಚಿಸಬೇಕು.

Click Here

LEAVE A REPLY

Please enter your comment!
Please enter your name here