ಕೋಟ :ಬಾರಿಕೆರೆ ಯುವಕ ಮಂಡಲದಿಂದ ಸಹಾಯಹಸ್ತ

0
403

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಬಾರಿಕೆರೆ ನಿವಾಸಿಯಾಗಿರುವ ರಾಘವೇಂದ್ರ ಪೂಜಾರಿಯವರಿಗೆ ಬಾರಿಕೆರೆ ಯುವಕ ಮಂಡಲದ ವತಿಯಿಂದ 50,000 ರೂಪಾಯಿ ಆರ್ಥಿಕ ಸಹಾಯ ಧನವನ್ನು ನೀಡಲಾಯಿತು.

Click Here

Click Here

ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್, ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ರವಿ ಕುಂದರ್, ಸಂಘದ ಪ್ರಮುಖರಾದ ರತ್ನಾಕರ ಬಾರಿಕೆರೆ, ಪವನ್ ಕುಂದರ್, ಅಶೋಕ್ ಕುಂದರ್, ರಮೇಶ್ ಒಳಮಾಡು, ಸಂತೋಷ್, ಅವಿನಾಶ್, ಗಣಪಣ್ಣ, ವಿಜಯ್ ಪೂಜಾರಿ, ಪ್ರಮೋದ್ ಆಚಾರ್, ಉದಯ್ ತಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here