ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗಿಳಿಯಾರು ಗ್ರಾಮದ ಹರ್ತಟ್ಟು ಸೀತಾರಾಮ ದೇವಾಡಿಗ ಮನೆ ಬಾರಿ ಗಾಳಿಮಳೆಗೆ ಸಂಪೂರ್ಣ ಕುಸಿದು ಹಾನಿಗೊಂಡ ಹಿನ್ನಲ್ಲೆಯಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಗುರುವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮನೆ ಹಾನಿಗೊಂಡ ಕುಟುಂಬಕ್ಕೆ ನೆರವು ನೀಡುವ ಭರವಸೆ ನೀಡಿದರು.
ಕೋಟ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಅಜಿತ್ ದೇವಾಡಿಗ, ಪ್ರೇಮಾ ಹರೀಶ್, ಮಾಜಿ ಸದಸ್ಯ ಗೋಪಾಲ್ ಪೈ ಮತ್ತಿತರರು ಇದ್ದರು.











