ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಟದ ಮಣೂರು ಪಡುಕರೆ ಕೃಷಿಕ ಜಯರಾಮ ಶೆಟ್ಟಿ ಕೃಷಿ ಭೂಮಿಯಲ್ಲಿ ಶೇಂಗಾ ಬೆಳೆಯ ಕ್ಷೇತ್ರೋತ್ಸವ, ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಮಂಗಳವಾರ ಜರಗಿತು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ವಲಯ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ,ಅಖಿಲ ಭಾರತೀಯ ಸುಸಂಘಟಿತ ಭತ್ತ ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಕೃಷಿ ಇಲಾಖೆ ಉಡುಪಿ ಹಾಗೂ ರೈತಧ್ವನಿ ಸಂಘ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಯಿತು.
ಹಲವಾರು ಮಂದಿ ರೈತ ಸಮುದಾಯದ ನಡುವೆ ಮಣೂರು ಕೃಷಿ ಭೂಮಿಯಲ್ಲಿ ಸುಮಾರು 33 ವಿವಿಧ ತಳಿಗಳ ಶೇಂಗಾ ಗಮನ ಸೆಳೆಯಿತ್ತಲ್ಲದೆ, ಇಲ್ಲಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀದೇವಿ ಎ ಜಕ್ಕೇರಾಳ್ ಶೇಂಗಾ ಗದ್ದೆಯಲ್ಲಿ ವಿವಿಧ ತಳಿಗಳ ಪ್ರಾರಂಭಿಕ ಬಿತ್ತನೆ ಅದರ ಕ್ರಮಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ನಂತರ ನಡೆದ ಕ್ಷೇತ್ರೋತ್ಸವ ಸಭಾಕಾರ್ಯಕ್ರಮವನ್ನು ಬಾಬಾ ಆಟೋಮಿಕ್ ಸಂಶೋಧನಾ ಕೇಂದ್ರ ಮುಂಬೈ ಇದರ ಶೇಂಗಾ ಸುಧಾರಿತ ವಿಭಾಗದ ಮುಖ್ಯಸ್ಥ ಡಾ.ಆನಂದ್ ಬಡಿಗಣ್ಣನವರ್ ಉದ್ಘಾಟಿಸಿ ಶೇಂಗಾ ಬೆಳೆ ಕರಾವಳಿ ಭಾಗದ ಬಹು ಮುಖ್ಯ ಬೆಳೆಯಾಗಿ ವಿಶ್ವಮಟ್ಟದಲ್ಲಿ ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದೆ. ಇಲ್ಲಿನ ಈ ಬೆಳೆಗೆ ಬಾರಿ ಬೇಡಿಕೆಯಿದ್ದು ಕಾಲಕ್ರಮೇಣ ಇದರ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಈ ದಿಸೆಯಲ್ಲಿ ಶೇಂಗಾ ಬೆಳೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹೊಸ ಹೊಸ ಆವಿಷ್ಕಾರಕ್ಕೆ ಮುನ್ನುಗ್ಗ ಬೇಕಾದ ಅಗತ್ಯವನ್ನು ಹಾಗೂ ಇಲ್ಲಿ ಕೈಗೊಂಡ ಸಂಶೋಧನೆಯ ವಿವಿಧ ತಳಿಗಳ ಆಯ್ಕೆ ಪ್ರಕ್ರಿಯೆಯನ್ನು ವಿವರವಾಗಿ ತಿಳಿಸಿದರು.
ಕರಾವಳಿ ಭಾಗಕ್ಕೆ ಸೂಕ್ತ ಶೇಂಗಾ ಬೆಳೆ ತಾಂತ್ರಿಕ ಕೈಪಿಡಿಯನ್ನು ಇಲಾಖಾಧಿಕಾರಿಗಳು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕ ರೈತಧ್ವನಿ ಸಂಘದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ಶೇಂಗಾ ಬೆಳೆಯ ವಿವಿಧ ಪ್ರಾಕಾರಗಳ ಬಗ್ಗೆ ನೆರೆದ್ದ ವಿಜ್ಞಾನಿಗಳು ಇಲಾಖಾಧಿಕಾರಿಗಳಾದ ಧಾರವಾಡ ತಳಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಡಾ.ವಿಜೇಂದ್ರ ಎಸ್ ಸಂಗಮ್, ಎಣ್ಣೆಕಾಳು ಮತ್ತು ತಳಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್ ಮೊಟಗಿ, ಅಖಿಲ ಭಾರತೀಯ ಸುಸಂಘಟಿತ ಬೀಜ ಅಭಿವೃದ್ಧಿ ಕೃಷಿ ವಿಶ್ವವಿದ್ಯಾಲಯ ಜಿ.ಕೆ.ವಿ.ಕೆ ಬೆಂಗಳೂರು ಇದರ ಸಹ ಪ್ರಾಧ್ಯಾಪಕಿ ಡಾ.ನೇತ್ರಾ ಎನ್, ಹೈದರಾಬಾದ್ ಎಣ್ಣೆಕಾಳು ಸಸ್ಯ ತಳಿ ಅಭಿವೃದ್ಧಿ ವಿಭಾಗದ ಡಾ.ಜ್ಞಾನೇಶ್ವರ ದೇಶ್ ಮುಖ್, ಬ್ರಹ್ಮಾವರ ಕೆ.ವಿಕೆ ಹಿರಿಯ ವಿಜ್ಞಾನಿ ಡಾ.ಧನಂಜಯ.ಬಿ, ವಲಯ ಕೃಷಿ ಮತ್ತು ತೋಟಗಾರಿಕೆ ಕೇಂದ್ರ ಬ್ರಹ್ಮಾವರ ಸಹ ಸಂಶೋಧನಾ ನಿರ್ದೇಶಕ ಡಾ. ರೇವಣ್ಣ ರೇವಣ್ಣವರ್, ಉಡುಪಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ್ , ಶೇಂಗಾ ಬೆಳೆ ಹಾಗೂ ಅದರ ವಿವಿಧ ಆಯಾಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ನಿರ್ದೇಶಕ ಜಿ. ತಿಮ್ಮ ಪೂಜಾರಿ, ಕೃಷಿಕರಾದ ಶಿವಮೂರ್ತಿ ಕೆ. ಭಾಸ್ಕರ ಶೆಟ್ಟಿ ಮಣೂರು ಇದ್ದರು.
ಡಾ.ಕೆ.ವಿ ಸುಧೀರ್ ಕಾಮತ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬ್ರಹ್ಮಾವರದ ಜಿ. ಕೆ. ಎಂ.ಎಸ್ ತಾಂತ್ರಿಕ ಅಧಿಕಾರಿ ಪ್ರವೀಣ್ ಕೆ ಎಂ. ನಿರೂಪಿಸಿ, ವಂದಿಸಿದರು. ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭ ಸಹಕರಿಸಿದರು.












