ಮಣೂರು-ಪ್ಲಾಸ್ಟಿಕ್ ಮುಕ್ತ ಹೆದ್ದಾರಿಗೆ ಸಂಕಲ್ಪ, ಚಾಲನೆ

0
488

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್ ಮಣೂರು, ಯಕ್ಷಸೌರಭ ಕಲಾರಂಗ ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗಿಳಿಯಾರು ಯುವಕ ಮಂಡಲ, ಹಂದಟ್ಟು ಮಹಿಳಾ ಬಳಗ ಇವರುಗಳ ಜಂಟಿ ಸಂಯೋಗದೊಂದಿಗೆ ಪ್ರತಿ ಭಾನುವಾರದ ಪರಿಸರಸ್ಮೇಹಿ ಸ್ವಚ್ಛತಾ ಅಭಿಯಾನಕ್ಕೆ 108ನೇ ವಾರದ ಸಂಭ್ರಮ ಆ ಪ್ರಯುಕ್ತ ಕೋಟ ಗ್ರಾ.ಪಂ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಮಣೂರು ಸಮೀಪ ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯಕ್ರಮ ಫೆ.13ರಂದು ನಡೆಯಿತು. ಸುಮಾರು 20ಚೀಲಕ್ಕೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೋಟ ಗ್ರಾಮಪಂಚಾಯತ್ ಎಸ್.ಎಲ್.ಆರ್.ಎಮ್ ಘಟಕಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಅದರ ಮುಖ್ಯಸ್ಥೆ ಲೋಲಾಕ್ಷಿ ,ಕೋಟ ಗ್ರಾಮಪಂಚಾಯತ್ ಹಾಗೂ ಗೀತಾನಂದ ಫೌಂಡೇಶನ್ ಪೂರ್ಣಸಹಕಾರ ನೀಡಿತು.

Click Here

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಮೃತ್ ಜೋಗಿ,ಸಂಚಾಲಕ ಅಜಿತ್ ಆಚಾರ್ಯ, ಯಕ್ಷಸೌರಭ ಕಲಾರಂಗ ಕೋಟ ಇದರ ಸತ್ಯನಾರಾಯಣ ಆಚಾರ್ಯ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷ ಪುಷ್ಭಾ ಕೆ ಹಂದಟ್ಟು, ಪಂಚವರ್ಣದ ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್ಯ, ಸದಸ್ಯರಾದ ಭಾಸ್ಕರ್ ದೇವಾಡಿಗ,ಸುಧೀರ್ ಕೊಯ್ಕೂರು,ಕಾರ್ತಿಕ್ ಆಚಾರ್ಯ, ಕಾರ್ತಿಕ್ ಎನ್,ರವೀಂದ್ರ ಕೋಟ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here