ಹೆಮ್ಮಾಡಿ :ಕುಸ್ತಿ ಪಂದ್ಯಾಟದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0
709

Click Here

Click Here

ಕುಂದಾಪುರ ಮಿರರ್ ಸುದ್ದಿ…

ಹೆಮ್ಮಾಡಿ; ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಭಂಡಾರ್‌ಕಾರ್ಸ್ ಪದವಿಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 61 ಕೆ.ಜಿ ವಿಭಾಗದಲ್ಲಿ ನಿಶ್ಚಲ್ ಫಿಲಿಪ್ ಬೆಳ್ಳಿ ಪದಕ, 65 ಕೆ.ಜಿ ವಿಭಾಗದಲ್ಲಿ ಕ್ರಮವಾಗಿ ಅನುಲ್ ಚಿನ್ನದ ಪದಕ ಹಾಗೂ ಡೆನ್ಜಿಲ್ ಡಯಸ್ ಬೆಳ್ಳಿಯ ಪದಕ, 70ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಸೂರಜ್ ಡಯಾಸ್ ಕಂಚಿನ ಪದಕ, 79 ಕೆ.ಜಿ.ವಿಭಾಗದಲ್ಲಿ ಶ್ರೀನಿಧಿ ಶೆಟ್ಟಿ ಚಿನ್ನದ ಪದಕ, 86 ಕೆ.ಜಿ.ವಿಭಾಗದಲ್ಲಿ ಪುನಿತ್ ಕಂಚಿನ ಪದಕ, 92 ಕೆ.ಜಿ.ವಿಭಾಗದಲ್ಲಿ ಆರ್ಯ ಬೆಳ್ಳಿಯ ಪದಕ, 97 ಕೆ.ಜಿ.ವಿಭಾಗದಲ್ಲಿ ಕ್ರಮವಾಗಿ ಚೇತನ್ ಖಾರ್ವಿ ಚಿನ್ನದ ಪದಕ, ಹಾಗೂ ರೋಹಿತ್ ಬೆಳ್ಳಿಯ ಪದಕ, 97ಕೆ.ಜಿ.ಮೇಲ್ಪಟ್ಟ ವಿಭಾಗದಲ್ಲಿ ಶ್ರೀಶ ಶೆಟ್ಟಿ ಚಿನ್ನದ ಪದಕ,74 ಕೆ.ಜಿ.ವಿಭಾಗದಲ್ಲಿ ಹರ್ಷ ಬೆಳ್ಳಿಯ ಪದಕ, 92 ಕೆ.ಜಿ.ವಿಭಾಗದಲ್ಲಿ ಗಣೇಶ ಕಂಚಿನ ಪದಕ ಪಡೆದಿರುತ್ತಾರೆ.

Click Here

ಈ ಮೂಲಕ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ಸ್ ಆಗಿ ಹೊರಹೊಮ್ಮುವುರೊಂದಿಗೆ ವಿದ್ಯಾರ್ಥಿಗಳಾದ
ಅನುಲ್,  ಶ್ರೀನಿಧಿ,ಚೇತನ್,  ಶ್ರೀಶ ಶೆಟ್ಟಿ,ನಿಶ್ಚಲ್ ಪಿಲಿಫ್, ಡೆನ್ಜಿಲ್ ಡಯಾಸ್,  ಆರ್ಯ, ರೋಹಿತ್,ಹರ್ಷ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Click Here

LEAVE A REPLY

Please enter your comment!
Please enter your name here