ಕುಂದಾಪುರ : ನೋವು ಮರೆಸಿ ನಗು ತರಿಸುವ ಶಕ್ತಿ ಕಾರ್ಟೂನುಗಳಿಗಿವೆ – ಕಾರ್ತಿಕ್ ಗೌಡ

0
381

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಸಮಸ್ಯೆ, ಸಂಕಷ್ಟ, ಬೇಸರ, ದುಃಖ ಸೇರಿದಂತೆ ಜೀವನದ ಯಾವುದೇ ಹಂತಗಳಲ್ಲಿಯೂ ನಮ್ಮ ನೋವನ್ನು ತಣಿಸಿ ನಗುವನ್ನು ತರಿಸುವ ಶಕ್ತಿ ಇರುವುದು ಕಾರ್ಟೂನ್ಗಳಿಗೆ ಮಾತ್ರ. ಕಳೆದ ಹತ್ತು ವರ್ಷಗಳಿಂದ ಕಾರ್ಟೂನ್ ಹಬ್ಬವನ್ನು ಸಂಘಟಿಸುವುದು ಕೂಡ ಒಂದು ಸಾಧನೆಯೇ ಆಗಿದೆ. 10 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಈ ಹಬ್ಬ ಶತಮಾನೋತ್ಸವವನ್ನು ಕಾಣುವಂತಾಗಲಿ ಎಂದು ಹೊಂಬಾಳೆ ಫಿಲ್ಮ್ಸ್ನ ಕಾರ್ತಿಕ್ ಗೌಡ ಹೇಳಿದರು.

ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ ನೇತೃತ್ವದ ಕಾರ್ಟೂನ್ ಬಳಗದ ವತಿಯಿಂದ ಆಯೋಜಿಸಲಾದ “ಕಾರ್ಟೂನ್ ಹಬ್ಬ-2022” ವನ್ನು ಕ್ಯಾರಿಕೇಚರ್ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

Click Here

ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರ “ಗೋ ಕೊರೋನಾ ಗೋ” ಸಂಚಿಕೆ-2ನ್ನು ಅನಾವರಣಗೊಳಿಸಿ ಮಾತನಾಡಿದ ಹಿರಿಯ ವ್ಯಂಗ್ಯ ಚಿತ್ರಕಾರ ಜೇಮ್ಸ್ ವಾಜ್, ಚಲನಚಿತ್ರಗಳು ಬಿಡುಗಡೆಯಾದ ಬಳಿಕ ಬ್ಲಾಕ್ ಬಸ್ಟರ್. ಆದರೆ, ವ್ಯಂಗ್ಯಚಿತ್ರಗಳ ಸಂಕಲನಗಳು ಪುಸ್ತಕ ಬಿಡುಗಡೆಯ ಮೊದಲೇ ಬ್ಲಾಕ್ ಬಸ್ಟರ್ ಆಗುತ್ತದೆ. ಗೋ ಕೊರೋನಾ ಗೋ ಪ್ರಥಮ ಹಾಗೂ ಎರಡನೇ ಆವೃತ್ತಿಗಳು ವ್ಯಂಗ್ಯಚಿತ್ರಕಾರರ ವೃತ್ತಿ ಬದುಕಿಗೆ ಒಳ್ಳೆಯ ಕೈಪಿಡಿಯಾಗಿದೆ ಎಂದರು.

ಬರಹಗಾರ, ಚಿಂತಕ ಶಂಕರ ಕೆಂಚನೂರು ಮಾತನಾಡಿ, ಸತ್ಯವನ್ನು ತಮಾಷೆಯಾಗಿ ಹೇಳುವುದರಿಂದ ಮನ ಮುಟ್ಟುತ್ತದೆ. ವ್ಯಂಗ್ಯ ಚಿತ್ರಗಳ ಮೂಲಕ ಸಮಾಜಕ್ಕೆ ಕಟು ಸತ್ಯವನ್ನು ನೀಡುವ ಕೆಲಸವನ್ನು ಕಾರ್ಟೂನ್ಗಳು ಮಾಡುತ್ತಿದೆ. ವ್ಯಂಗ್ಯ ಚಿತ್ರಗಳಲ್ಲಿನ ಮೊನಚುಗಳಿಂದಾಗಿ ಮಾಧ್ಯಮಗಳಲ್ಲಿ ಅವಕಾಶ ಕಡಿಮೆಯಾಗುತ್ತಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ವೇದಿಕೆ ದೊರಕುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಎಂ.ದಿನೇಶ್ ಹೆಗ್ಡೆ ಮಾತನಾಡಿ, ಕುಂದಾಪುರದವರಿಗೆ ಕಳೆದ 9 ವರ್ಷಗಳಲ್ಲಿ ಕಾರ್ಟೂನ್ ಹಬ್ಬ ಈ ಸಂಭ್ರಮವನ್ನು ನೀಡುತ್ತಿದೆ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದ ಹಾಗೂ ನೀಡುತ್ತಿರುವ ಮಾಧ್ಯಮಗಳಲ್ಲಿ ರೇಖೆಗಳ ಮೂಲಕ ಜನರಿಗೆ ಅಗತ್ಯ ಮಾಹಿತಿಯನ್ನು ಬೇಗನೆ ಹಾಗೂ ನೇರವಾಗಿ ನೀಡುವ ಕಾರ್ಯಗಳು ವ್ಯಂಗ್ಯಚಿತ್ರಗಳಿಂದ ಆಗುತ್ತಿದೆ. ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ್ ಎ ಪಾಯಸ್, ಚಲನಚಿತ್ರ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದರು. ಕಾರ್ಟೂನ್ ಬಳಗದ ಸತೀಶ್ ಆಚಾರ್ಯ ಸ್ವಾಗತಿಸಿದರು, ಉಪನ್ಯಾಸಕಿ ಪ್ರೀಯಾಂಕ್ ಜೋಸೆಫ್ ನಿರೂಪಿಸಿದರು, ವ್ಯಂಗ್ಯಚಿತ್ರಕಾರರಾದ ರಾಮಕೃಷ್ಣ ಹೇರ್ಳೆ, ಚಂದ್ರಶೇಖರ ಶೆಟ್ಟಿ, ಕೇಶವ್ ಸಸಿಹಿತ್ಲು ಇದ್ದರು.

Click Here

LEAVE A REPLY

Please enter your comment!
Please enter your name here