ಕೋಟ ಗ್ರಾಮ ಲೆಕ್ಕಿಗರ ಕಛೇರಿಗೆ ಕುಂದಾಪುರ ಎ.ಸಿ ಭೇಟಿ

0
273

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟ ಗ್ರಾಮ ಲೆಕ್ಕಿಗರ ಕಛೇರಿಗೆ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ ಚಂದ್ರ ಭೇಟಿ ನೀಡಿ ಪ್ರಸ್ತುತ ಆಧಾರ್ ನಂ.ಗೆ ಆರ್.ಟಿ.ಸಿ. ಜೋಡಿಸುವ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು ಜನಸಾಮಾನ್ಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸುಲಭವಾಗಿ ಸಿಗುವಂತ್ತಾಗಲು ಆಧಾರ್‍ಗೆ, ಆರ್‍ಟಿಸಿ ಲಿಂಕ್ ಗೊಳಿಸುವ ಅಭಿಯಾನ ಎಲ್ಲೆಡೆ ನಡೆಯುತ್ತಿದೆ. ಇದರಿಂದ ಕೃಷಿಕರಿಗೆ ಸರಕಾರದ ಯೋಜನೆಗಳನ್ನು ಅತಿ ಶೀಘ್ರದಲ್ಲಿ ಯೋಜನೆ ಹಾಗೂ ಭೂಮಿಗಳ ಬಗ್ಗೆ ಸಮಗ್ರ ಮಾಹಿತಿಗೆ ಸಹಕಾರಿಯಾಗಲಿದೆ ಅಲ್ಲದೆ ಈ ಲಿಂಕ್ ಗೊಳಿಸುವ ಅಭಿಯಾನದಲ್ಲಿ ಜನಸಾಮಾನ್ಯರು ಶೀಘ್ರಗತಿ ಅನುಷ್ಠಾನಗೊಳಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೋಟಗ್ರಾಮಲೆಕ್ಕಿಗ ರಾಘವೇಂದ್ರ ಹಕ್ಲಾಡಿ, ಗ್ರಾಮ ಸಹಾಯಕ ರಾಜು ಕುಂದರ್, ಕೋಟ ಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ ಮತ್ತಿತರರು ಇದ್ದರು.

 

Click Here

LEAVE A REPLY

Please enter your comment!
Please enter your name here