ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟತಟ್ಟು ಪಡುಕರೆ ಶ್ರೀ ಶಿರಸಿ ಮಾರಿಕಾಂಬ ದೇವಸ್ಥಾನದ ವಾರ್ಷಿಕ ಮಹಾಸಭೆ ಭಾನುವಾರ ಶ್ರೀ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಯಿತು. ಅಲ್ಲದೆ ಪ್ರತಿ ಸಂಕ್ರಮಣದಂದು ಅನ್ನ ಸಂತರ್ಪಣೆ ನಡೆಸುವುದೆಂದು ಸಭೆಯಲ್ಲಿ ತಿರ್ಮಾನಿಸಿ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್ ನೇತ್ರತ್ವದಲ್ಲಿ ಭಾನುವಾರ ಮೊದಲ ಸಂಕ್ರಮಣ ಅನ್ನಸಂತಪರ್ಣ ಕಾರ್ಯಕ್ರಮ ನೆರವೆರಿತು.
ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ರಮೇಶ್ ಪೂಜಾರಿ, ಗೌರವಾಧ್ಯಕ್ಷರಾಗಿ ಆನಂದ್ ಸಿ ಕುಂದರ್, ಕಾರ್ಯದರ್ಶಿ ಮಂಜುನಾಥ ನಾಯ್ಕ್,ಉಪಾಧ್ಯಕ್ಷರಾಗಿ ಚಂದ್ರ ಪುತ್ರನ್, ಚಂದ್ರ ಪುತ್ರನ್ ಬಾರಕೂರು, ಜೊತೆ ಕಾರ್ಯದರ್ಶಿ ರಾಜೇಂದ್ರ ಕಾಂಚನ್, ಅರುಣ್ ಸಾಲಿಯಾನ್, ಸತೀಶ್ ಮೆಂಡನ್, ಕೋಶಾಧಿಕಾರಿಯಾಗಿ ನಾಗಪ್ಪ ಪೂಜಾರಿ, ಜತೆಕೋಶಾಧಿಕಾರಿಯಾಗಿ ವಿನಯ್ ಕುಂದರ್,
ಸಂಘಟನಾ ಕಾರ್ಯದರ್ಶಿಯಾಗಿ ಶರತ್ ಪೂಜಾರಿ, ಪ್ರದೀಪ್ ಪೂಜಾರಿ, ಗೌರವ ಸಲಹೆಗಾರರಾಗಿ ಸಂಜೀವ ಕುಂದರ್,ಬಸವ ಕುಂದರ್ ,ಬಾಬು ಪೂಜಾರಿ,ಶ್ರಿನಿವಾಸ ಪೂಜಾರಿ ಸಿದ್ಧಿ,ಕೃಷ್ಣ ಪುತ್ರನ್,ಅಶೋಕ್ ಪೂಜಾರಿ,ಉದಯ್ ತಿಂಗಳಾಯ,ಚಂದ್ರ ಎಸ್ ಮೆಂಡನ್,ಪ್ರಕಾಶ್ ತಿಂಗಳಾಯ,ಯೋಗೇಂದ್ರ ತಿಂಗಳಾಯ,ರಘು ಪೂಜಾರಿ,ಅಣ್ಣಪ್ಪ ತಿಂಗಳಾಯ,ಪ್ರಭಾಕರ ತಿಂಗಳಾಯ,ಚಂದ್ರ ಮರಕಾಲ, ಪ್ರಶಾಂತ್ ತೋಳಾರ್,ಅರುಣ್ ಕಾಂಚನ್, ಸತೀಶ್ ಮೆಂಡನ್,ಆನಂದ್ ಪೂಜಾರಿ ,ಸತೀಶ್ ಕಾನ್ ಮನೆ,ಸತೀಶ್ ಪಡುಕರೆ,ಸುಧಾಕರ ಶ್ರೀಯಾನ್,ವಿಠ್ಠಲ ಪೂಜಾರಿ,ಅನಂತ ಕುಂದರ್,ಅರ್ಚಕರಾಗಿ ನೆಂದಪ್ಪ ಪೂಜಾರಿ,ಸಂಜೀವ ಪೂಜಾರಿ ಆಯ್ಕೆಗೊಂಡರು.











