ಸಿದ್ಧಾಪುರ :ಹೆನ್ನಾಬೈಲ್ ಸರ್ಕಾರಿ ಶಾಲೆಯಲ್ಲಿ ಆಷಾಡಾ ತಿಂಡಿ ಪ್ರದರ್ಶನ

0
256

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಹೆನ್ನಾಬೈಲ್ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಪ್ರಾಯೋಜಕತ್ವದಲ್ಲಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಳೆ ಕಾಲದ ಹತ್ತಾರು ಬಗೆಯ ಆಷಾಡಾ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

Click Here

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಉಪನ್ಯಾಸಕ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಮಾತನಾಡಿ ಹಳೆ ಕಾಲದ ಸಂಸ್ಕೃತಿ ಆಚಾರ ವಿಚಾರ ನಡೆ ನುಡಿ ಜತೆಗೆ ಅಂದಿನ ಕಾಲದ ಆಹಾರ ಪದ್ಧತಿ ಆರೋಗ್ಯ ದ್ರಷ್ಟಿ ,ಜೀವನ ಶೈಲಿಯಲ್ಲಿ ನಂಟು ಹೊಂದಿದೆ. ಧೀರ್ಘ ಆಯುಷ್ಯಕ್ಕೂ ಅಂದಿನ ಕಾಲದ ಆಹಾರ ಪದ್ಧತಿ ದೊಡ್ಡ ನಂಬಿಕೆ ಇದೆ ಆದುನಿಕ ಬದುಕಿಗೆ ಹೊಂದಿಕೊಂಡು ಅವೆಲ್ಲವೂ ಮರೆಯಾಗಿದೆ. ಆರೋಗ್ಯ ದೃಷ್ಟಿಯಲ್ಲಿ ಇಂತಹ ತಿಂಡಿ ತಿನಿಸುಗಳನ್ನು ಯುವ ಪೀಳಿಗೆ ಜತೆಗೆ ಸಮುದಾಯಕ್ಕೂ ಪರಿಚಯಿಸುವ ಅಗತ್ಯವಿದೆ ಎಂದರು.

ಶಾಲಾ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಸಾಹಿತಿ ಮುಸ್ತಾಕ್ ಹೆನ್ನಾಬೈಲ್, ಮುಖ್ಯ ಶಿಕ್ಷಕ ಪದ್ಮನಾಭ ಶೇಟ್, ಕಾರ್ಯಕ್ರಮ ರೂವಾರಿ ರಾಜೇಂದ್ರ ಬೆಚ್ಚಳ್ಳಿ, ಅಂಗನವಾಡಿ ಶಿಕ್ಷಕಿ ದಿವ್ಯ,ಸಹ ಶಿಕ್ಷಕಿ ಅಮೃತ, ಗೌರವ ಶಿಕ್ಷಕಿ ಶ್ರುತಿ ಮತ್ತಿತರರು ಉಪಸ್ಥಿತರಿದ್ದರು.

(ವಿಶೇಷವಾಗಿ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಹಳೆ ಕಾಲದ 20 ಬಗೆಯ ಆಹಾರ ಪದಾರ್ಥ ಖಾದ್ಯವನ್ನು ಪ್ರದರ್ಶನ ಮಾಡುವ ಮೂಲಕ ಹಿರಿಯ ಅತಿಥಿಗಳಿಂದ ಕಿರಿಯ ಶಾಲಾ ವಿದ್ಯಾರ್ಥಿಗಳಿಗೆ ತಿನ್ನುಸುವ ಜತೆಗೆ ಪರಿಚಯಿಸಿ ಸರಳ ಭೋಜನ ವ್ಯವಸ್ಥೆ ನಡೆಯಿತು)

Click Here

LEAVE A REPLY

Please enter your comment!
Please enter your name here