ಕೊಂಡಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೈತೊಳೆಯುವ ಘಟಕ ಹಾಗೂ ಅಂಗನವಾಡಿಗೆ ನೀರಿನ ಪಂಪ್ ಹಸ್ತಾಂತರ

0
531

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ರೋಟರಿ ಕ್ಲಬ್ ಶಂಕರನಾರಾಯಣದ ವತಿಯಿಂದ ಕೊಂಡಳ್ಳಿ ಶಾಲೆಗೆ ಕೈ ತೊಳೆಯುವ ಘಟಕ ಹಾಗೂ ಅಂಗನವಾಡಿಗೆ ನೀರಿನ ಪಂಪ್ ಹಸ್ತಾಂತರ ಕಾರ್ಯಕ್ರಮ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ನೆರವೇರಿತು.

ಕೈತೊಳೆಯುವ ಘಟಕವನ್ನು ಉದ್ಫಾಟಿಸಿದ ಶಂಕರನಾರಾಯಣ ರೋಟರಿ ಕ್ಲಬ್ ಅಧ್ಯಕ್ಷರಾದ ಶರತ್ ಹೆಗ್ಡೆ ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು ಎಂದು ಅಭಿಪ್ರಾಯಪಟ್ಟರು.

Click Here

ಡಾ. ಸಚ್ಚಿದಾನಂದ ವೈದ್ಯರು ಪೋಷಕರನ್ನುದ್ದೇಶಿಸಿ ಮನೆಯಲ್ಲಿ ಮಕ್ಕಳ ಜೊತೆ ಪೋಷಕರ ವರ್ತನೆ ಹೇಗಿರಬೇಕು ಎಂಬ ಕುರಿತು ಉಪನ್ಯಾಸ ನೀಡಿದರು. ಮಮತಾ ಆರ್ ಶೆಟ್ಟಿಯವರು ಮಾತನಾಡಿ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಿ ಎಂಬ ಕಿವಿಮಾತನ್ನು ಹೇಳಿದರು.

ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಉಷಾಲತಾ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ವೇದಿಕೆಯಲ್ಲಿ ದಯಾನಂದ ರಾವ್, ಸುಧಾಕರ ಹೆಗ್ಡೆ, ಅಂಗನವಾಡಿ ಕಾರ್ಯಕರ್ತೆ ವಿನೋದಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ರಾಮ ಮೊಗವೀರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿ ಸುಜಾತ ಎಚ್ ಕಾರ್ಯಕ್ರಮ ನಿರೂಪಿಸಿದರು. ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಹಾಗೂ ಗೌರವ ಶಿಕ್ಷಕಿಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here