ಕುಂದಾಪುರ :ನಿರೀಕ್ಷಾ ದಿನಕರ ಶೆಟ್ಟಿ ಮುಂಬಾರು ಇವರಿಗೆ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ

0
586

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕಾವ್ರಾಡಿ ಗ್ರಾಮದ ಪಡುವಾಲ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ನಿರೀಕ್ಷಾ ದಿನಕರ ಶೆಟ್ಟಿ ಅವರಿಗೆ ಕರ್ನಾಟಕ ನೇತಾಜಿ ಸೇವಾ ಟ್ರಸ್ಟ್ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ ಲಭಿಸಿದೆ.

ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿರುವ ನಿರೀಕ್ಷಾ ಮನೆಯಲ್ಲಿಯೇ ಗುರುವಿಲ್ಲದೆ ಯೋಗ ಶಿಕ್ಷಣವನ್ನು ಸ್ವ-ಪ್ರಯತ್ನದಿಂದ ಕಲಿತು ಕುಂದಾಪುರ ಭಾಗದಲ್ಲಿ ಹಲವು ಯೋಗ ಪ್ರದರ್ಶನ ನೀಡಿ, ರಾಜಧಾನಿ ಬೆಂಗಳೂರಿನಲ್ಲೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದವರು.

Click Here

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ನೇತಾಜಿ ಸೇವಾ ಟ್ರಸ್ಟ್ ವತಿಯಿಂದ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ನಡೆದ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ನಿರೀಕ್ಷಾ, ದಿನಕರ ಶೆಟ್ಟಿ ಮುಂಬಾರು, ಇವರಿಗೆ ರಾಜ್ಯಮಟ್ಟದ ಯೋಗ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿರೀಕ್ಷಾ ಪ್ರಗತಿಪರ ಕೃಷಿಕ ಮುಂಬಾರು ದಿನಕರ ಶೆಟ್ಟಿ ಅವರಪುತ್ರಿ.

Click Here

LEAVE A REPLY

Please enter your comment!
Please enter your name here