ಕನ್ನಡ ಶಾಲೆಯ ಮಹತ್ವ ಪಸರಿಸುವ ಕಾರ್ಯ ಶ್ಲಾಘನೀಯ – ಪುರುಷೋತ್ತಮ ದೇವಾಡಿಗ

0
194

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ : ಕನ್ನಡ ನಾಡು ನುಡಿ ಬಗ್ಗೆ ನಮ್ಮಲ್ಲಿ ಗೌರವ ಬೆಳೆಸಿಕೊಳ್ಳಬೇಕು ಅದರ ಜೊತೆಗೆ ನಾವು ಕಲಿತ ಕನ್ನಡ ಶಾಲೆಯ ಬಗ್ಗೆ ವಿಶೇಷ ಕಾಳಜಿಯೊಂದಿಗೆ ಅಭಿವೃದ್ಧಿಗೆ ಜೊತೆಯಾಗಬೇಕು. ಕನ್ನಡ ಶಾಲೆಯ ಮಹತ್ವ ಸಾರುವ ವಿಡಿಯೋ ಸಾಕಷ್ಟು ಪ್ರಸಿದ್ಧಿ ಪಡೆದು ನಮ್ಮ ಶಾಲೆಯ ಹೆಸರಿನ ಕೀರ್ತಿ ಬೆಳಗಿಸಿದ ತಂಡಕ್ಕೆ ಅಭಿನಂದನೆಗಳು. ಇನ್ನಷ್ಟು ಕನ್ನಡ ಶಾಲೆಯ ಮಹತ್ವ ಸಾರುವ ಹೊಸ ಪ್ರಯತ್ನಗಳು ನಡೆಯುತ್ತಿರಲಿ ಎಂದು ಸಾೈಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಪುರುಷೋತ್ತಮ ದೇವಾಡಿಗ ಅವರು ಹೇಳಿದರು.

Click Here

ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶ್ರೀವಿನಾಯಕ ಯುವಕ ಮಂಡಲ ಸಾೈಬ್ರಕಟ್ಟೆ-ಯಡ್ತಾಡಿ ವತಿಯಿಂದ ಇತ್ತೀಚಿಗೆ ಕನ್ನಡ ಶಾಲೆಯ ಮಹತ್ವ ಸಾರುವ “ನಾನು ಹರ್ಷಿಣಿ..” ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರಾಂತಿ ಮೂಡಿಸಿದ ತಂಡದ ಸಾೈಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಸುರೇಂದ್ರ ಕೋಟ, ವಿದ್ಯಾರ್ಥಿಗಳಾದ ಕುಮಾರಿ ಪ್ರಣಿತಾ , ಪುನೀತಾ, ಅಧ್ವಿಕ್ ಎಸ್, ರೀತ್ವಿನ್ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಸಾೈಬ್ರಕಟ್ಟೆ ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಜಯಂತಿ, ಹಾಗೂ ಶಿಕ್ಷಕ ವೃಂದ, ಶ್ರೀವಿನಾಯಕ ಯುವಕ ಮಂಡಲದ ಸದಸ್ಯರು, ಜನನಿ ಕನ್ನಡ ಸಂಘ ಸಾೈಬ್ರಕಟ್ಟೆಯ ಪದಾಧಿಕಾರಿಗಳು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿರಿದ್ದರು.

Click Here

LEAVE A REPLY

Please enter your comment!
Please enter your name here