ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ .ಸಿ ಟ್ರಸ್ಟ್ (ರಿ) ಕೋಟೇಶ್ವರ ಯೋಜನಾ ವ್ಯಾಪ್ತಿಯ ಸಿದ್ದಾಪುರ ವಲಯದ ಯಡಾಮೊಗೆ ಗ್ರಾಮದ ಶ್ರೀ ಕ್ಷೇತ್ರ ಸಿದ್ದೇಶ್ವರ ಕೊಡಚಾದ್ರಿ ಹಲವರಿ ಮಠದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯನೀಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರೂ.3.00 ಲಕ್ಷ ಮೊತ್ತ ಮಂಜೂರು ಮಾಡಿದ್ದು, ಇದರ ಡಿಡಿಯನ್ನು ಡಿ.3ರಂದು ಯೋಜನಾಧಿಕಾರಿ ನಾರಾಯಣ್ ಪಾಲನ್ ಅವರು ಮಠದ ಪೀಠಾಧಿಪತಿಗಳಾದ ಯೋಗಿ ಜಗದೀಶ್ ನಾಥ್ ಜಿ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಕೆ. ಎಸ್ .ಮಡಿವಾಳ್, ವಲಯ ಮೇಲ್ವಿಚಾರಕರಾದ ಸವಿತಾ ಬಾಯಿ, ವಲಯ ಅಧ್ಯಕ್ಷರಾದ ಉದಯ್ ನಾಯ್ಕ್, ಸೇವಾಪ್ರತಿನಿಧಿ ದಿವ್ಯ, ಹಾಗು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.











