ಬಸ್ರೂರು: ಮಾರ್ಗೋಳಿ ಶನೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ಸಂಪನ್ನ

0
587

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ: ಕುಂದಾಫುರ ತಾಲೂಕಿನ ಬಸ್ರೂರು ಸಮೀಪದ ಮಾರ್ಗೋಳಿಯಲ್ಲಿನ ಶ್ರೀ ಚೆನ್ನಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಸೋಮವಾರ ರಾತ್ರಿ ಸಂಪನ್ನಗೊಂಡಿತು.

ಇದೇ ಸಂದರ್ಭ ಭಜನಾ ಕಾರ್ಯಕ್ರಮವು ನಡೆಯಿತು. ಇದೇ ಸಂದರ್ಭ ಶನೇಶ್ವರನ ಪಲ್ಲಕ್ಕಿ ಉತ್ಸವವು ಶನೇಶ್ವರ ದೇವಸ್ಥಾನದಿಂದ ಬಸ್ರೂರಿನ ತನಕ ಮೆರವಣಿಗೆಯಲ್ಲಿ ಸಾಗಿದ ಭಕ್ತರು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನಕ್ಕೆ ಬರಲಾಯಿತು. ಕಳೆದ ಹತ್ತು ವರ್ಷಗಳಿಂದ ಶನೀಶ್ವರ ದೇವರ ಆರಾಧನೆ ನಡೆಯುತ್ತಿದ್ದು, ಎಲ್ಲಾ ರೀತಿಯ ಪೂಜಾ ವಿಧಾನಗಳು ನಡೆದವು. ಕಾರ್ಯಕ್ರಮದಲ್ಲಿ ಊರ ಹಾಗೂ ಪರಊರ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಊರ ಹಿರಿಯರಾದ ಅಬ್ಬಕ್ಕ ಮಾರ್ಗೋಳಿ ದೀಪ ಬೆಳಗಿಸಿದರು. ಮರ್ಗೋಳಿ ದೇವಸ್ಥಾನದ ಮೊಕ್ತೇಸರ ಮಹಾಲಿಂಗ, ವೆಂಕಟೇಶ್ವರ ಕಳಂಜಿ, ಶ್ರೀನಿವಾಸ್ ಆಚಾರ್ಯ, ಆನಂದ ಪೂಜಾರಿ, ಗೋವಿಂದ ಮರ್ಗೋಳಿ, ಗೋಪಾಲ ಕಳಂಜೆ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.

Click Here

LEAVE A REPLY

Please enter your comment!
Please enter your name here