ಕುಂದಾಪುರ ಮಿರರ್ ಸುದ್ದಿ…
ಕೋಟ: ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಾತೃಸಂಸ್ಥೆ ಕೋಟ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ಇದೇ ಮೇ .25ರಂದು ಸಾಮಾಜಿಕ ಕಾರ್ಯಕ್ರಮ ಹದಿಹರೆಯದವರ ಸಮಸ್ಯೆಗಳು ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮ.
9ನೇ ಮಾಲಿಕೆ ಅರಿವು ನಿಮಗಿರಲಿ ನೆರವು ಶೀರ್ಷಿಕೆಯಡಿ ಕೋಟ ಗ್ರಾ.ಪಂ ಪ್ರಕೃತಿ ಸಂಜೀವಿನಿ ಒಕ್ಕೂಟದ ಸಂಯೋಜನೆಯೊಂದಿಗೆ ಇಲ್ಲಿನ ಕೋಟ ಗ್ರಾ.ಪಂ.ಸಭಾಭವನದಲ್ಲಿ ಪೂರ್ವಾಹ್ನ 10-00ಕ್ಕೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಂಪನ್ಮೂಲ ವ್ಯಕ್ತಿಯಾಗಿ ತೆಕ್ಕಟ್ಟೆ ಪರಿಸರದ ಪ್ರಸಿದ್ಧ ಶ್ರೀ ದೇವಿ ಕ್ಲಿನಿಕ್ ಇದರ ವೈದ್ಯೆ ಡಾ.ಸುಮಂಗಲ ಭಾಗವಹಿಸಲಿದ್ದಾರೆ ಎಂದು ಪಂಚವರ್ಣ ಮಹಿಳಾ ಮಂಡಲದ ಆಧ್ಯಕ್ಷೆ ಲಲಿತಾ ಗಿಳಿಯಾರು ತಿಳಿಸಿದ್ದಾರೆ.











