ಕುಂದಾಪುರದ ವಡೇರಹೋಬಳಿಯ ‘ಪ್ರಕೃತಿ’ ನಿವಾಸದಲ್ಲಿ ಪುರಾಣ ಕಥೆಗಳನ್ನು ಹೇಳುವ ಗೊಂಬೆಗಳ ಆರಾಧನೆ

0
129

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನವರಾತ್ರಿಗೆ ಗೊಂಬೆಗಳನ್ನು ಕೂರಿಸುವ ಪದ್ದತಿ ಕಳೆದ ಎರಡು ವರ್ಷದಿಂದ ಕುಂದಾಪುರಕ್ಕೂ ಪಸರಿಸಿದೆ. ಕುಂದಾಪುರದ ವಡೇರಹೋಬಳಿಯ ‘ಪ್ರಕೃತಿ’ ನಿವಾಸದ ಹಿರಿಯ ಫಾರ್ಮಸಿ ಅಧಿಕಾರಿ ಬಿ.ಎಮ್. ಚಂದ್ರಶೇಖರ ಮತ್ತು ಶೀಲಾ ಚಂದ್ರಶೇಖರ ಅವರ ಮನೆಯಲ್ಲಿ ಕಳೆದ ಎರಡು ವರ್ಷದ ನವರಾತ್ರಿಯಿಂದ ಈ ಗೊಂಬೆ ಕೂರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇವರ ಸೊಸೆ ಐಶ್ವರ್ಯ ಅವಿನವ್ ತನ್ನ ತವರು ಭಾಗದ ಆಚರಣೆಯನ್ನು ಇಲ್ಲಿಗೂ ಪರಿಚಯಿಸಿದ್ದಾರೆ. ಹಲವು ವೈವಿಧ್ಯಮಯ, ಪುರಾಣ ಕಥೆಗಳನ್ನು ಹೇಳುವ ಗೊಂಬೆಗಳ ಆರಾಧನೆ ಪರಿಸರದ ಜನರ ಕುತೂಹಲ ಕೆರಳಿಸಿದೆ. ವಿಶೇಷವಾಗಿ ಮಕ್ಕಳನ್ನು ಆಕರ್ಷಿಸಿದೆ.

ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವಿನವ್ ಬಿ ಹಾಗೂ ಐಶ್ವರ್ಯ ಪಿ ದಂಪತಿ ಕಳೆದ ವರ್ಷದಿಂದ ಕುಂದಾಪುರದಲ್ಲಿ ನವರಾತ್ರಿ ಆಚರಣೆ ಮಾಡುತ್ತಿದ್ದಾರೆ.

ಈ ಗೊಂಬೆಗಳು ಕಥೆಯನ್ನು ಹೇಳುತ್ತವೆ.
ಪೌರಾಣಿಕ ಕಥೆಗಳನ್ನು ಪರಿಣಾಮಕಾರಿಯಾಗಿ ಹೇಳುವಂತೆ ಗೊಂಬೆಗಳ ಜೋಡಣೆ ಮಾಡಿದ್ದಾರೆ. ಈ ಗೊಂಬೆ ಕುರಿಸುವಿಕೆಯಲ್ಲಿ ಪ್ರಧಾನವಾದುದು ಪಟ್ಟದ ಗೊಂಬೆಗಳು. ರಾಜರಾಣಿಯ ಗೊಂಬೆಗಳು ಪ್ರಧಾನವಾಗಿರುತ್ತದೆ. ಇಲ್ಲಿ ಐಶ್ವರ್ಯ ಅವರು ಮೇಲ್ಬಾಗವನ್ನು ಬೆಳ್ಳಿಬೆಟ್ಟವನ್ನಾಗಿ ರೂಪಿಸಿದ್ದಾರೆ. ಶಿವಪಾರ್ವತಿ ಷಣ್ಮುಖ ಗಣಪತಿ ಹಾಗೂ ಶಿವಗಣಗಳು ಕೈಲಾಸ ಪರಿಕಲ್ಪನೆಯಲ್ಲಿ ಕಂಡು ಬಂದರೆ ಗಣಪತಿ ಚತುರ್ಥಿ ಧರೆಗೆ ಹೊರಟಂತಹ ಗೊಂಬೆ ಇದೆ. ಬಳಿಕ ಮೈಸೂರು ದಸರ ಗೊಂಬೆಗಳನ್ನು ಜೋಡಿಸಿದ್ದಾರೆ. ನಂತರದ ಸಾಲುಗಳಲ್ಲಿ ದಶಾವತರಾದ ಗೊಂಬೆಗಳು, ದ್ರೋಣರ ಗುರುಕುಲ, ಕೃಷ್ಣನ ಬಾಲ್ಯಲೀಲೆಗಳು, ಪುರಾಣದ ಮಹತ್ವದ ಸನ್ನಿವೇಶದ ಗೊಂಬೆಗಳು, ಮದುವೆಯ ದಂಪತಿಗಳು ಹೀಗೆ ನೂರಾರು ಗೊಂಬೆಗಳು ಪುರಾಣದ ಎಳೆಯನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುವಂತಿವೆ.

ಪುರಾಣದ ಕಥೆ ಹೇಳುವ ಗೊಂಬೆಗಳ ಜೊತೆಯಲ್ಲಿ ವಾಸ್ತವದ ಆಕರ್ಷಣೆ ಹಾಗೂ ಗ್ರಾಮಾಂತರ ಪ್ರದೇಶದ ಜನಜೀವನವನ್ನು ತಿಳಿಸುವ ಗೊಂಬೆಗಳು ಇವೆ.ಹಳ್ಳಿಯ ಬದುಕು, ಕೃಷಿ, ಮೃಗಾಲಯ, ಪ್ರಾಣಿ ಪಕ್ಷಿಗಳು ಇತ್ಯಾದಿ ಗೊಂಬೆಗಳು ಆಧುನಿಕತೆಯ ಕಥೆಯನ್ನು ಹೇಳುವಂತಿವೆ.

Click Here

ಒಟ್ಟಾರೆಯಾಗಿ ಕುಂದಾಪುರದ ‘ಪ್ರಕೃತಿ’ ಗೊಂಬೆಗಳಿಂದ ಗಮನ ಸಳೆದಿದೆ. ಮಾಯಾಲೋಕವೇ ಇಲ್ಲಿ ಸೃಷ್ಟಿಯಾಗಿದೆ. ಗೊಂಬೆ ಕುರಿಸುವ ಪದ್ದತಿ ಇರುವ ಮನೆಗಳಲ್ಲಿ ಗೊಂಬೆಗಳ ಸಂಗ್ರಹವೂ ಒಂದು ಹವ್ಯಾಸ. ಐಶ್ವರ್ಯ ಅವರು ಬೇರೆ ಬೇರೆ ಕಡೆ ಹೋದಾಗಲೆಲ್ಲ ಗೊಂಬೆಗಳನ್ನು ಖರೀದಿಸುತ್ತಾರೆ. ಚೆನ್ನಪಟ್ಟಣದ ಮರದ ಗೊಂಬೆಗಳು ಇಲ್ಲಿವೆ. ಮೈಸೂರು ಗೊಂಬೆಗಳು ಇವೆ. ಪ್ರದೇಶವಾರು ವೈವೀದ್ಯತೆಯ ಗೊಂಬೆಗಳು ಇವರ ಸಂಗ್ರಹದಲ್ಲಿದೆ.

ಗೊಂಬೆಗಳನ್ನು ಕುರಿಸುವುದು ಒಂದು ಶ್ರದ್ದಾ ಧಾರ್ಮಿಕ ನಂಬಿಕೆ ಹಾಗೂ ಆಚರಣೆ. ಅದಕ್ಕೊಂದು ಆಚರಣಾ ಕ್ರಮವಿದೆ.ಒಂಭತ್ತು ದಿನಗಳ ಕಾಲ ಪೂಜೆ , ನೈವೇದ್ಯ ಮಾಡಬೇಕು. ಒಂದೊಂದು ದಿನ ಒಂದೊಂದು ಬಗೆಯ ತಿನಿಸು ನೈವೇದ್ಯಕ್ಕೆ ಮಾಡಲಾಗುತ್ತದೆ. ಗೊಂಬೆಗಳನ್ನು ನೋಡಲು ಮಕ್ಕಳು ಆಗಮಿಸುತ್ತಾರೆ. ಮಕ್ಕಳು ಗೊಂಬೆಗಳನ್ನು ನೋಡುತ್ತಾ ಪುರಾಣ ಲೋಕಕ್ಕೆ ಹೋಗಿಬಿಡುತ್ತಾರೆ. ಮಕ್ಕಳ ಮನಸ್ಸನ್ನು ಅತ್ಯಂತ ವೇಗವಾಗಿ ಪ್ರವೇಶ ಮಾಡುವುದು ಇದೇ ಗೊಂಬೆಗಳು. ಹಾಗಾಗಿ ಮಕ್ಕಳಿಗೆ ಗೊಂಬೆಗಳೆಂದರೆ ವಿಶೇಷ ಆಕರ್ಷಣೆ. ಮಕ್ಕಳ ಮನಸ್ಸು ಕೂಡಾ ಅರಳುತ್ತದೆ.

ಗೊಂಬೆ ಕುರಿಸುವ ಪದ್ದತಿಯನ್ನು ಸೊಸೆ ಪರಿಚಯಿಸಿದ್ದಕ್ಕೆ ಚಂದ್ರಶೇಖರ ಶೀಲಾವತಿ ದಂಪತಿಗಳು ಅತೀವ ಖುಷಿ ಪಟ್ಟಿದ್ದಾರೆ. ಸಾಮಾಜಿಕ, ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಚಂದ್ರಶೇಖರ ಈ ಆಚರಣೆಯಿಂದ ನಮಗೆ ಮಾತ್ರವಲ್ಲ ಪರಿಸರದ ಜನರಿಗೂ ಖುಷಿಯಾಗಿದೆ ಎನ್ನುತ್ತಾರೆ.

ಐಶ್ವರ್ಯ ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕೂಡಾ ಧಾರ್ಮಿಕ, ಆಚಾರ ವಿಚಾರಗಳಲ್ಲಿ ವಿಶೇಷ ಆಸಕ್ತಿ ಇಟ್ಟುಕೊಂಡವರು. ಪತಿಯ ಮನೆಯಲ್ಲಿ ತವರಿನ ಹಬ್ಬ ಆಚರಿಸಲು ಸಂಭ್ರಮವಾಗುತ್ತದೆ. ವರ್ಷದಿಂದ ವರ್ಷಕ್ಕೆ ಗೊಂಬೆಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇನ್ನಷ್ಟು ಗೊಂಬೆಗಳನ್ನು ಸಂಗ್ರಹಿಸಬೇಕು ಎನ್ನುತ್ತಾರೆ.

ಚಂದ್ರಶೇಖರ್ ಅವರು ಹಿರಿಯ ಫಾರ್ಮಸಿ ಅಧಿಕಾರಿ. ವೃತ್ತಿಯ ಜತೆಯಲ್ಲಿ ರೋಟರಿ ಕ್ಲಬ್ ಮತ್ತಿತ್ತರ ಸಮಾಜಸೇವಾ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು. ಮಕ್ಕಳು ಅವಿನವ್, ಅಮಿತ್. ಇಬ್ಬರು ಇಂಜಿನಿಯರ್. ಬೆಂಗಳೂರಿನಲ್ಲಿ ವೃತ್ತಿನಿರತರಾದರೂ ಕೂಡಾ ಮಕ್ಕಳು ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ತಂದೆತಾಯಿಗಳೊಂದಿಗೆ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.

Click Here

LEAVE A REPLY

Please enter your comment!
Please enter your name here