ಕೋಟ :ಕಾಂಗ್ರೆಸ್ ಮುಖಂಡ, ಮತ್ಸ್ಯೋದ್ಯಮಿ ಬಿ.ಕೆ.ತೇಜ ಪೂಜಾರಿ ನಿಧನ

0
1310

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ‌ ಸಾಲಿಗ್ರಾಮ ನಿವಾಸಿ ಉದ್ಯಮಿ, ಬಿಲ್ಲವ ಮುಖಂಡ ಬಿ.ಕೆ ತೇಜ ಪೂಜಾರಿ 77ವ. ಗುರುವಾರ ಅನಾರೋಗ್ಯದಿಂದ ನಿಧನರಾದರು.

Click Here

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿ, ಸಾಸ್ತಾನ ಮಂಡಲ ಪಂಚಾಯತ್ ಮಾಜಿ ಸದಸ್ಯರಾಗಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸ್ಥಾನಿಯ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಕೋಟ ಬ್ರಹ್ಮ ಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಮಾತಾ ವುಡ್ ಇಂಡಸ್ಟ್ರಿ ಇದರ ಮಾಲಿಕರಾಗಿದ್ದು ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ಪ್ರಸಿದ್ಧಿ ಹೊಂದಿದ್ದರು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಸಂತಾಪ ಸೂಚಿಸಿದ್ದಾರೆ .

Click Here

LEAVE A REPLY

Please enter your comment!
Please enter your name here