ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ನಿಂದ ಮನೆ ನಿರ್ಮಿಸಲು ಒಂದು ಲಕ್ಷ ಧನ ಸಹಾಯವನ್ನು ಸುಂಕಾಡಿಯ ಜಯಲಕ್ಷ್ಮಿ ಅವರಿಗೆ ಹಸ್ತಾಂತರಿಸಲಾಯಿತು.
ಪಿ.ಸಿ.ಪಿ ಆಡಿಟೋರಿಯಂ ನಲ್ಲಿ ಲಯನ್ ಸಂದೀಪ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಲಯನ್ಸ್ ಅಧ್ಯಕ್ಷರಾದ ಲಯನ್ ಸಂದೀಪ ಶೆಟ್ಟಿ ಅವರು ವಸತಿ ಯೋಜನೆಗೆ ಧನ ಸಹಾಯದ ಚೆಕ್ಕನ್ನು ನೀಡಲಾಯಿತು.
ಸಾಮನ್ಯ ಸಭೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಸಿಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ 317C ಇದರ ಎಲ್ ಸಿ ಐ ಎಫ್ ಚೀಫ್ ಕೋಆರ್ಡಿನೇಟರ್ ಲಯನ್ ವರುಣ್ ಕೆ. ಶೆಟ್ಟಿಯವರು ಅವರು ಎಲ್ ಸಿ ಐ ಎಫ್ ನಿಂದ ವಿವಿಧ ಸವಲತ್ತುಗಳನ್ನು ಹೇಗೆ ಪಡೆಯಬಹುದು ಎಂದು ವಿವರಿಸಿದರು.
ಸಭೆಯಲ್ಲಿ ಈ ವರ್ಷ ನೂತನವಾಗಿ ಎಲ್ ಸಿ ಐ ಎಫ್ ಗೆ ದೇಣಿಗೆ ನೀಡಿದ ಲಯನ್ ಕೆಂಚನೂರು ರಮೇಶ್ ಶೆಟ್ಟಿ, ಲಯನ್ ರವಿಕಿರಣ್ ಡಿ’ಕೋಸ್ತ್ ಹಾಗೂ ಲಯನ್ ಸಂದೀಪ್ ಶೆಟ್ಟಿ ಯವರನ್ನು ಸನ್ಮಾನಿಸಯಿತು.
ವೇದಿಕೆಯಲ್ಲಿ ಪ್ರಾಂತ Vರ ಅಧ್ಯಕ್ಷ ಲಯನ್ ರಜತ್ ಹೆಗ್ಡೆ, ಕಾರ್ಯದರ್ಶಿ ಲಯನ್ ವಿಲ್ಫ್ರೆಡ್ ಮಿನೆಜಸ್ ಮತ್ತು ಕೋಶಾಧಿಕಾರಿ ಲಯನ್ ನಿತೇಶ್ ಡಿ’ಕೋಸ್ತ್ ಉಪಸ್ಥಿತರಿದ್ದರು.
ಲಯನ್ ಅಶ್ವಿನಿ ಸಂದೀಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು











