ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಬೆಂಗಳೂರು ಲೀಜನ್ ಆತಿಥ್ಯದಲ್ಲಿ ಬೆಂಗಳೂರಿನ ಬಂಟರ ಸಭಾ ಭವನದಲ್ಲಿ ರಾಷ್ಟ್ರೀಯ ಸಮ್ಮೇಳನದಲ್ಲಿ SCI ರಾಷ್ಟ್ರೀಯ ನಿರ್ದೇಶಕರಾದ ಹುಸೇನ್ ಹೈಕಾಡಿಯವರಿಗೆ ಔಟ್ ಸ್ಟ್ಯಾಂಡಿಂಗ್ ನ್ಯಾಷನಲ್ ಡೈರೆಕ್ಟರ್ ವಿನ್ನರ್ ಅವಾರ್ಡ್ನ್ನು SCI ರಾಷ್ಟ್ರೀಯ ಅಧ್ಯಕ್ಷರಾದ SNR PPS MR ಜಯೇಶಾ ರವರು ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ವಾಸುದೇವನ್ ಕೇರಳ, ಖಜಾಂಚಿ ಸಂಪತ್ ಕುಮಾರ್ ದುಬೈ, ಜಿ ಎಲ್ ಸಿ ಜಗದೀಶ್, ರಾಷ್ಟ್ರೀಯ ಉಪಾಧ್ಯಕ್ಷರಾದ ಸಿದ್ದಗಂಗೈಯಾ, ಬೋಬಾನ್, ಸುರೇಖಾ ಮುರಳೀಧರ ಶಿವಮೊಗ್ಗ, ಗೀತಾಲತಾ ಮೈಸೂರ್ ನಿರ್ದೇಶಕರಾದ ಶಿವಕುಮಾರ್, ಪ್ರದೀಪ್, ಪುಷ್ಪ ಶೆಟ್ಟಿ ಶಿವಮೊಗ್ಗ, ಇನ್ನಿತರರು ಉಪಸ್ಥಿತರಿದ್ದರು.












