ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಿಠಲವಾಡಿ ಮೈನಾಡಿ ರಸ್ತೆಯ ನಿವಾಸಿ, ಇಂಜಿನಿಯರ್ ರವಿಶಂಕರ್ ಎ.3ರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 57ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಪುರಸಭೆ ಮಾಜಿ ಅಧ್ಯಕ್ಷೆ ಕಲಾವತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸರಳ ಸಜ್ಜನಿಕೆಯ ಮೂಲಕ ಜನಾನುರಾಗಿಯಾಗಿದ್ದ ಅವರು ವೃತ್ತಿ ಜೀವನದಲ್ಲೂ ಕೂಡಾ ದಕ್ಷತೆ, ಬದ್ಧತೆಗೆ ಹೆಸರಾಗಿದ್ದರು.












