ಸದೃಢ ಭಾರತಕ್ಕಾಗಿ ಬಲಿಷ್ಠ ಬಿಜೆಪಿ ಧ್ಯೇಯವಾಕ್ಯ ಮನೆಮನೆಯಲ್ಲಿ ಮೊಳಗಲಿ -ಸಚಿವ ಕೋಟ

0
382

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂದಟ್ಟು ಹಾಗು ಪಡುಕರೆಯ 4 ಮತ್ತು 5 ನೇ ವಾರ್ಡಿನ ಭಾರತೀಯ ಜನತಾ ಪಾರ್ಟಿಯ ಬೂತ್ ಅಧ್ಯಕ್ಷರ ಮನೆಗೆ ನಾಮ ಫಲಕ ಅಳವಡಿಕೆ ಕಾರ್ಯಕ್ರಮ ಹಾಗೂ ಸಶಕ್ತ ಬೂತ್ – ಸದೃಢ ಭಾರತ ಅಧ್ಯಯನ ಹಾಗೂ ಪರಿಶೀಲನ ಸಭೆ ಭಾನುವಾರ ನಡೆಯಿತು.

Click Here

ಈ ಸಂಧರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸದೃಢ ಭಾರತಕ್ಕಾ ಬಲಿಷ್ಠ ಬಿಜೆಪಿ ಎಂಬ ಧ್ಯೇಯಗಳನ್ನು ಇರಿಸಿ ಪ್ರತಿಯೊಬ್ಬರು ಪಕ್ಷಕ್ಕಾಗಿ ಶ್ರಮಿಸಬೇಕಾಗಿದೆ.ಮುಂದಿನ ಚುನಾವಣೆ ದೃಷ್ಠಿಯನ್ನು ಇರಿಸಿಕೊಂಡು ಮನೆ ಮನೆಯಲ್ಲಿ ಭಾರತೀಯ ಜನತಾಪಾರ್ಟಿ ಘೋಷ ಮೊಳಗಿಸದಬೇಕು ತನ್ಮೂಲಕ ಇನ್ನೊಮ್ಮೆ ರಾಜ್ಯದಲ್ಲಿ ಭಾಜಪವನ್ನು ಅಧಿಕಾರಕ್ಕೆ ಏರಿಸಬೇಕು ಎಂದು ಕರೆ ಇತ್ತರು.
ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಕೋಟತಟ್ಟು ಶಕ್ತಿ ಕೇಂದ್ರದ ವಿಸ್ತಾರಕ ಸದಾನಂದ ಉಪ್ಪಿನಕುದ್ರು,ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ,ಕುಂದಾಪುರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರಿ, ಕೋಟತಟ್ಟು ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಮೊದ್ ಹಂದೆ, ಹೊಸದಾಗಿ ಆಯ್ಕೆಯಾಗಿ ಮೂರು ಬೂತ್‍ನ ಅಧ್ಯಕ್ಷರಾದ ಪ್ರಭಾಕರ ಪೂಜಾರಿ ಹಂದಟ್ಟು , ರಾಮ ಎಮ್. ಬಂಗೇರ , ರಮಾನಂದ ಮೆಂಡನ್ ಹಾಗೂ ಕೋಟತಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ವಾಸು ಪೂಜಾರಿ,ಸದಸ್ಯರು ಕೋಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here