“ಬೆಳ್ಳಿ ಹಬ್ಬ”ದ ಸಂಭ್ರಮದಲ್ಲಿ ಲಯನ್ಸ್ ಕ್ಲಬ್ ಹಂಗಳೂರು: ಬಸ್ರೂರು ಮೂರುಕೈ ಬಳಿ ಬಸ್ ಪ್ರಯಾಣಿಕರ ತಂಗುದಾಣ ಕೊಡುಗೆ

0
682

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ಹಂಗಳೂರು ವತಿಯಿಂದ ಕುಂದಾಪುರದ ಬಸ್ರೂರು ಮೂರುಕೈ ಬಳಿ ನಿರ್ಮಾಣಗೊಂಡ ಹೊಸ ಬಸ್ ನಿಲ್ದಾಣದ ಲೋಕಾರ್ಪಣೆ ಕಾರ್‍ಯಕ್ರಮ ಶನಿವಾರ ಸಂಜೆ ನಡೆಯಿತು.

Click Here

ಸುಸಜ್ಜಿತ ಬಸ್ ನಿಲ್ದಾಣ ಉದ್ಘಾಟಿಸಿದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ ಮಾತನಾಡಿ, ಇಂತಹ ಸಮಾಜಮುಖಿ ಕೆಲಸವನ್ನು ಹಂಗಳೂರು ಕ್ಲಬ್‌ನಿಂದ ನಿರಂತರವಾಗಿ ನಡೆಯುತ್ತಿರುವುದು ಖುಷಿಯ ಸಂಗತಿ. ಹತ್ತಾರು ಕೊಡುಗೆಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಇದು ಈ ಭಾಗಕ್ಕೆ ಒಳ್ಳೆಯ ಕೊಡುಗೆಯಾಗಿದೆ ಎಂದರು.

ಈ ಜಾಗದಲ್ಲಿ ಮಾಡಲು ಬಹಳಷ್ಟು ಸವಾಲು ಎದುರಾಗಿತ್ತು. ಅಡಚಣೆಗಳ ಮಧ್ಯೆಯೂ ಉತ್ತಮ ನಿಲ್ದಾಣವನ್ನು ನಿರ್ಮಿಸಿರುವುದು ಹರ್ಷ ತಂದಿದೆ ಎಂದು ಲಯನ್ಸ್ ಕ್ಲಬ್ ಹಂಗಳೂರಿನ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಸಂಚಾಲಕ ಎಚ್. ಬಾಲಕೃಷ್ಣ ಶೆಟ್ಟಿ ಹೇಳಿದರು.

ಮೊದಲ ಉಪ ಗವರ್ನರ್ ಡಾ| ನೆರ್ರಿ ಕರ್ನೆಲಿಯೋ, ಸೆಕೆಂಡ್ ಉಪ ಗವರ್ನರ್ ಮಹಮ್ಮದ್ ಹನೀಫ್, ಹಿಂದಿನ ಜಿಲ್ಲಾ ಗವರ್ನರ್ ಡಾ| ಕೆ. ಮಧುಸೂಧನ್ ಹೆಗ್ಡೆ, ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಮ್ಯಾಥ್ಯೂ ಜೋಸೆಫ್, ಕಾರ್‍ಯದರ್ಶಿ ವಿಲ್ರೆಡ್ ಮಿನೇಜಸ್, ಎಲ್ಲ ಸದಸ್ಯರು, ಕುಂದಾಪುರದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ಮಾಜಿ ಅಧ್ಯಕ್ಷ ವಿಕಾಸ ಹೆಗ್ಡೆ, ಪುರಸಭೆ ಸದಸ್ಯರಾದ ಶೇಖರ್ ಪೂಜಾರಿ, ಪ್ರಭಾಕರ್, ಲಯನ್ಸ ಪ್ರಮುಖರಾದ ಶೇಖರ್ ಶೆಟ್ಟಿ, ಝೋನ್ ಚೇರ್ಮನ್ ಬನ್ನಾಡಿ ಸೋಮನಾಥ ಹೆಗ್ಡೆ ,ಫಿಲೀಪ್ ಡಿ’ಕೋಸ್ತ್, ರವಿಕಿರಣ್ ಡಿ’ಕೋಸ್ತ್, ರೋವನ್ ಡಿ’ಕೋಸ್ತ್, ನಿತೇಶ್ ಡಿ’ಕೋಸ್ತ್, ಅಧಿಕಾರಿಗಳು, ಇತರೆ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here