ಕಾರ್ಕಡ ಗೆಳೆಯರ ಬಳಗ ಕಾರಂತ ಪುರಸ್ಕಾರ ಬನ್ನಂಜೆ ಸಂಜೀವ ಸುವರ್ಣ ಆಯ್ಕೆ

0
289

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟು ಹಬ್ಬದ ಅಂಗವಾಗಿ ಕಾರ್ಕಡ ಗೆಳೆಯರ ಬಳಗ ವತಿಯಿಂದ ನೀಡಲ್ಪಡುವ `ಗೆಳೆಯರ ಬಳಗ – ಕಾರಂತ ಪುರಸ್ಕಾರಕ್ಕೆ ಈ ಬಾರಿ ಕಾರಂತರ ಒಡನಾಡಿ, ಯಕ್ಷಗಾನ ಕಲಾವಿದ,ಹಾಗೂ ಗುರು ,ಸಾಹಿತಿ ನಾಡು ನುಡಿ ಏಳಿಗೆಗಾಗಿ ಅನನ್ಯವಾಗಿ ತೊಡಗಿಸಿಕೊಂಡಿರುವ ಬನ್ನಂಜೆ ಸಂಂಜೀವ ಸುವರ್ಣ ಭಾಜನರಾಗಿದ್ದಾರೆ.

Click Here

ಮೂಲ ಬನ್ನಂಜೆಯವರಾದ ಇವರು ಯಕ್ಷಗಾನ ಕಲೆಯ ಅನೇಕ ಆಯಾಮಗಳನ್ನು ಡಾ ಕಾರಂತರೇ ಮೋದಲಾದ 21 ಕಲಾ ಗುರುಗಳಿಂದ ಕಲಿತು, ಪರಿಣಿತರಾಗಿ, ಗುರುಗಳಾಗಿ ಬೆಳೆದು ದೇಶ ವಿದೇಶಗಳಲ್ಲಿ 5000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಸಾಧಕರು ಇವರಾಗಿದ್ದಾರೆ. ಯಕ್ಷಗಾನವಲ್ಲದೇ, ಭರತನಾಟ್ಯ,ಕೋಡಿಯಾಟ್ಟಂ, ಕಥಕ್ , ನಾಟಕ ಕಲೆಯಲ್ಲೂ ಪರಿಣತಿ ಪಡೆದವರಾಗಿದ್ದಾರೆ.ಡಾ ಕೋಟ ಶಿವರಾಮ ಕಾರಂತರ ನಂತರ ಇವರ ನಿರ್ದೇಶನದಲ್ಲಿಯಕ್ಷಗಾನ ಬ್ಯಾಲೆ ದೇಶ ವಿದೇಶಕ್ಕೆ ಕೋಂಡೋಯ್ದು, ಪ್ರದರ್ಶನ ನೀಡಿ ಖ್ಯಾತಿ ಗಳಿಸಿದ ಹೆಗ್ಗಳಿಕೆ ಇವರದ್ದು.ಈ ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಒಳಗೊಂಡಿದೆ.

ಗೆಳೆಯರ ಬಳಗ ಕಾರಂತ ಪುರಸ್ಕಾರ-2022 ಅಕ್ಟೋಬರ್ ತಿಂಗಳ 15ರ ಶನಿವಾರ ಸಂಜೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಬನ್ನಂಜೆಯವರಿಗೆ ಪ್ರದಾನಮಾಡಲಿದ್ದಾರೆ. ಎಂದು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here