ಕುಂದಾಪುರ ಮಿರರ್ ಸುದ್ದಿ…
ಕೋಟ: ಭಜನಾ ಪರಿಷತ್ ಧರ್ಮಸ್ಥಳ ಇದರ ವತಿಯಿಂದ ಸೆ. 23. ರಂದು ನಡೆಯುವ ಭಜನಾ ಕಮ್ಮಟದ ಭಜನೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯಖಾವಂದರ ಸಮ್ಮುಖದಲ್ಲಿ ಕೊಡಮಾಡುವ ಭಜನಾ ಸಾಧಕ ಪ್ರಶಸ್ತಿಗೆ ಉಡುಪಿ ತಾಲೂಕಿನಿಂದ ಆಯ್ಕೆಯಾಗಿರುವ ಕೋಟತಟ್ಟು ಪಡುಕರೆ ಭಗವತ್ ಭಜನಾ ಮಂದಿದರದ ಹಿರಿಯ ಭಜಕ ಹಾಗೂ ಸರಿಸುಮಾರು ನಾಲ್ಕು ದಶಗಳ ಕಾಲ ಭಗವತ್ ಭಜನಾ ಮಂದಿರದ ಅರ್ಚಕರಾಗಿ ಪೂಜಾ ಕೈಂಕರ್ಯದಲ್ಲಿ ತೋಡಗಿಕೊಂಡಿರುವ ಕೋಟತಟ್ಟು ಪಡುಕರೆ ಬಾಬು ಪೂಜಾರಿಯವರು ಪ್ರಶಸ್ತಿ ಪಡೆಯಲಿದ್ದಾರೆ.











