ಕುಂದಾಪುರ ಮಿರರ್ ಸುದ್ದಿ…
ಕೋಟ: ಬಾಲ್ಯದಲ್ಲಿ ಪರಿಸರದಿಂದ ಗಾಢವಾದ ಅನುಭವಗಳಿಗೆ ಸಮಕಾಲೀನ ಸಂದರ್ಭಗಳು ಅನುಕೂಲಕರವಾಗಿ ಮೇಳೈಸಿದಾಗ ಪರಿಣಾಮಕಾರಿಯಾದ ಕತೆಗಳು ಹುಟ್ಟುತ್ತವೆ ಎಂಬುದಕ್ಕೆ ಈ ಕೃತಿಗಳೆ ಸಾಕ್ಷಿ ಎಂದು ಬೆಂಗಳೂರಿನ ಶ್ರೀಲೋಲ ಸೋಮಯಾಜಿ ವಿರಚಿತ ಪ್ರಮದಿತವ್ಯಮ್’ ಕಥಾ ಸಂಕಲನವನ್ನು ಪರಿಚಯಿಸಿ ಡಾ. ಅನಿಲ ಕುಮಾರ ಶೆಟ್ಟಿ ಹೇಳಿದರು.
ಕೃತಿಯನ್ನು ನಾಡೋಜ ಕೆ.ಪಿ.ರಾಯರು ಬಿಡುಗಡೆಗೊಳಿಸಿ ವಿವರಿಸಿದರು. ಈ ಸಂದರ್ಭದಲ್ಲಿ ಪುಸ್ತಕ ಪ್ರಕಾಶಕ ಮೈಸೂರಿನ ಸಂಸ್ಕೃತಿ ಸುಬ್ರಹ್ಮಣ್ಯರನ್ನು ಗೌರವಿಸಲಾಯಿತು. ಸಾಹಿತಿ ಚಿತ್ರಪಾಡಿ ಉಪೇಂದ್ರ ಸೋಮಯಾಜಿಯವರ ಮನೆಯಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗೋಡು ರಮೇಶ ಭಟ್ಟರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಶಿಕ್ಷಕಿ ಮಹಾಲಕ್ಷ್ಮಿ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು, ಅಮೋಘ ಸೋಮಯಾಜಿ ಪ್ರಾರ್ಥನೆಗೈದರು, ಶ್ರೀಲೋಲ ಸೋಮಯಾಜಿ ವಂದನಾರ್ಪಣೆಗೈದರು.











