ಕುಂದಾಪುರ ಮಿರರ್ ಸುದ್ದಿ…
ಕೋಟ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಕೋಡಿ ಕನ್ಯಾಣ ಇವರ ವತಿಯಿಂದ ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ರ್ಯಾಂಕ್ ಪಡೆದ ಸಹನಾ ಪೂಜಾರಿ ಇವರಿಗೆ ಮುಂದಿನ ಶೈಕ್ಷಣಿಕ ಕಾರ್ಯಕ್ಕೆ ಆರ್ಥಿಕ ಸಹಾಯ ನೀಡಲಾಯಿತು.
ಇದೇ ವೇಳೆ ಕೋಡಿ ಬೇಂಗ್ರೆ ನಿವಾಸಿ ಕಾವೇರಿ ಪುತ್ರಿಯ ವಿವಾಹಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಕೃಷ್ಣಪೂಜಾರಿ.ಪಿ, ವಿಶ್ವನಾಥ ಪೂಜಾರಿ,ತಿಮ್ಮ ಪೂಜಾರಿ,ಪ್ರಶಾಂತ್ ಪೂಜಾರಿ, ಸುದಿನಾ, ವಾಸು, ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.











