ಕೋಟ – ಮೇಳದ ಕಲಾವಿದರಿಂದ ಯಜಮಾನರಿಗೆ ಸನ್ಮಾನ

0
183

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ವತಿಯಿಂದ ನಡೆಸಲ್ಪಡುವ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ಯಕ್ಷಗಾನ ತಿರುಗಾಟ ಸೋಮವಾರ ದೇವರ ಸೇವೆಯ ಮೂಲಕ ತೆರೆಕಂಡಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಮೇಳದ ಯಜಮಾನ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳನ್ನು ಮೇಳದ ಕಲಾವಿದರು ಒಗ್ಗೂಡಿ ಸನ್ಮಾನಿಸಿದರು.

Click Here

ಮೇಳದ ಮ್ಯಾನೇಜರ್ ಕೋಟ ಸುರೇಶ್ ಮಾತನಾಡಿ ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟ ಕೊನೆಯ ಘಳಿಗೆಯನ್ನು ಮೇಳದ ಯಜಮಾನರಿಗೆ ಸಮರ್ಪಿದ್ದೇವೆ.ಯಕ್ಷಗಾನ ಮೇಳಗಳನ್ನು ಮುನ್ನಡೆಸುವ ಹೊಣೆಗಾರಿಗೆ ವ್ಯವಸ್ಥಾಪಕರಿಗಿಂತ ಯಜಮಾನರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಕಲಾವಿದರನ್ನು ಪ್ರೀತಿಯಿಂದ ಕಾಣುವ ಜೊತೆಗೆ ಅವರ ಆಶೋತ್ತರಗಳನ್ನು ಇಡೇರಿಸುವ ಮನಸ್ಥಿತಿ ನಿಜಕ್ಕೂ ಪ್ರಶಂಸನೀಯ, ಕಲಾರಾಧನೆಯ ಜೊತೆ ಸಾಂಸ್ಕೃತಿಕ ,ಸಾಮಾಜಿಕ ,ಸಹಾಯ ಮಾಡುವ ಅವರ ಕಾರ್ಯತತ್ಪರತೆಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್,ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಭಾಗವತರಾದ ರಾಘವೇಂದ್ರ ಮಯ್ಯ ಹಾಲಾಡಿ,ಮತ್ತಿತರರು ಕಲಾವಿದರು ,ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್ ನಿರೂಪಿಸಿದರು. ವಂದಿಸಿದರು.

ಶ್ರೀ ಕ್ಷೇತ್ರದ ಮೇಳದ ಯಜಮಾನ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ದಂಪತಿಗಳನ್ನು ಮೇಳದ ಕಲಾವಿದರು ಒಗ್ಗೂಡಿ ಸನ್ಮಾನಿಸಿದರು. ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್,ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು,ಭಾಗವತರಾದ ರಾಘವೇಂದ್ರ ಮಯ್ಯ ಹಾಲಾಡಿ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here