ಕುಂದಾಪುರ ಮಿರರ್ ಸುದ್ದಿ…
ಕೋಟ: ಅನ್ಯೋನ್ಯತಾ ಗೂಡ್ಸ್ ವಾಹನ ಚಾಲಕರು ಮತ್ತು ಮಾಲಕರು ಸಾಸ್ತಾನ ಇವರ ನೇತ್ರತ್ವದಲ್ಲಿ ಭಾನುವಾರ ವನಮಹೋತ್ಸವ ಕಾರ್ಯಕ್ರಮ ಜರಗಿತು. ಅನ್ಯೋನ್ಯತಾ ಗೂಡ್ಸ್ ವಾಹನ ಚಾಲಕರು ಮತ್ತು ಮಾಲಕ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷ ಸೂರ್ಯ ಪೂಜಾರಿ, ಉದ್ಯಮಿ ಐರೋಡಿ ಸುರೇಶ್ ಕುಂದರ್ ಮಾರ್ಗದರ್ಶನದಲ್ಲಿ ಸಸಿ ವಿತರಣೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಐರೋಡಿ ಗ್ರಾ. ಪಂ. ಮಾಜಿ ಅಧ್ಯಕ್ಷರು ವಿಠ್ಠಲ ಪೂಜಾರಿ, ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್ , ಸಾಸ್ತಾನ ಗೋಳಿಗರಡಿ ದೈವಸ್ಥಾನದ ಧರ್ಮದರ್ಶಿ ವಿಠ್ಠಲ ಪೂಜಾರಿ ಪಾಂಡೇಶ್ವರ , ರಕ್ತೇಶ್ವರಿ ದೇವಸ್ಥಾನ ಪಾಂಡೇಶ್ವರ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಪಾಂಡೇಶ್ವರ, , ಪಾಂಡೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ಹಾಂಡ, ಚಂದ್ರ ಮೋಹನ್, ಪ್ರತಾಪ್ ಶೆಟ್ಟಿ, ಸಾಸ್ತಾನ ಸಿ ಎ ಬ್ಯಾಂಕ್ ಅಧ್ಯಕ್ಷ ಶ್ರೀಧರ್ ಪಿ.ಎಸ್, ಸ್ಥಳೀಯ ಉದ್ಯಮಿಗಳಾದ ಗಣಪಯ್ಯ ಆಚಾರ್, ಡೆರಿಕ್ ಡಿಸೋಜ, ಸುಭಾಷ್ ಶೆಟ್ಟಿ, ಸುರೇಶ್ ಶೆಟ್ಟಿ, ಪ್ರಕಾಶ್, ದಿನಕರ್ ಕೋಡಿ, ತ್ಯಾಗರಾಜ್, ವಸಂತ, ಹಾಗೂ ಬ್ರಹ್ಮಾವರ ಚಾಲಕರ ಸಂಘದ ಅಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೇಶವ ಆಚಾರ್ ನಿರೂಪಿಸಿ ವಂದಿಸಿದರು.











