ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಜುಲೈ 2023ರಂದು ವಯೋನಿವೃತ್ತಿ ಹೊಂದಿದ ಸಿದ್ಧಾಪುರ ಶಾಲೆಯ ಸಹಶಿಕ್ಷಕ ಶ್ರೀಧರ ಜೋಗಿ ಹಾಗೂ ಸೂರ್ಗೋಳಿ ಶಾಲೆಯ ಮುಖ್ಯ ಶಿಕ್ಷಕ ರಾಮ ಶೆಟ್ಟಿ ಇವರನ್ನು ಕುಂದಾಪುರ ವಲಯದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ವತಿಯಿಂದ ಗುರುವಂದನ ಕಾರ್ಯಕ್ರಮದ ಅಂಗವಾಗಿ ವಲಯಾಧ್ಯಕ್ಷ ಗಣೇಶ ಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಗೌರವಿಸಿ ಬೀಳ್ಕೊಡಲಾಯಿತು.
ಪ್ರಧಾನ ಕಾರ್ಯದರ್ಶಿ ರಾಮ ಮೊಗವೀರ, ಖಜಾಂಚಿ ಶ್ರೀನಾಥ ಜಿ ಪೂಜಾರಿ, ಉಪಾಧ್ಯಕ್ಷರಾದ ವನಜ ಎಸ್ ಹಾಗೂ ಶಶಿಧರ ಶೆಟ್ಟಿ, ಜಿಲ್ಲಾ ಸಹಕಾರ್ಯದರ್ಶಿ ಸುಚಿತ್ರಾ, ಸಂಘಟನಾ ಕಾರ್ಯದರ್ಶಿ ರೇಖಾ ಕೆ ಎಲ್ ಹಾಗೂ ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











