ನಾಗೂರು : ಯು.ಮೋನಪ್ಪ ಶೆಟ್ಟಿ ಪ್ಯೂಯಲ್ ಸ್ಟೇಷನ್ ಶುಭಾರಂಭ

0
283

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಇಲ್ಲಿನ ನಾಗೂರು ಆಂಜನೇಯ ದೇವಸ್ಥಾನದ ಎದುರುಗಡೆ ಯು.ಮೋನಪ್ಪ ಶೆಟ್ಟಿ ಪ್ಯೂಯಲ್ ಸ್ಟೇಷನ್ (24×7 )ಶನಿವಾರದಂದು ಶುಭಾರಂಭಗೊಂಡಿತು.

ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆಯವರು ಉದ್ಗಾಟಿಸಿ ಮಾತನಾಡಿ ಒಂದು ಊರಿನಲ್ಲಿ ಅತೀ ಹೆಚ್ಚು ಹೊಸ ಹೊಸ ಉದ್ಯಮಗಳು ಆರಂಭವಾದರೆ ಹೊಸ ಹೊಸ ಉದ್ಯೋಗ ಅವಕಾಶಗಳು ಆರಂಭವಾಗುದರ ಜೊತೆಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಬಂದಾಗ ಕೂಡ ಜಾಸ್ತಿ ಪೆಟ್ರೋಲ್ ಡೀಸೆಲ್ ದಾಸ್ತಾನಿರಿಸಲು ಅನುಕೂಲವಾಗುತ್ತದೆ ಎಂದು ಹೇಳಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.

Click Here

ಪ್ಯೂಯಲ್ ಸ್ಟೇಷನ್ ನಿರ್ಮಾಣ ಆಗುವುದರಲ್ಲಿ ಸಹಕರಿಸಿದ ಗಣ್ಯರನ್ನು ಸಂಸ್ಥೆ ವತಿಯಿಂದ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಭಾರತ್ ಪೆಟ್ರೋಲಿಯಂ ವಲಯ ಮ್ಯಾನೇಜರ್ ಅಮೂಲ್ ಬೋಸ್ಲೆ, ಭಾರತ್ ಪೆಟ್ರೋಲಿಯಮ್ ಅಭಿಯಂತರರಾದ ಆಶೀಶ್ ಕುಮಾರ್, ಅಭಿಷೇಕ್ ಸೇಲ್ಸ್ ಆಫೀಸರ್ ಉಡುಪಿ, ಭಾಸ್ಕರ ಶೆಟ್ಟಿ ಯಡೇರಿ ಉದ್ಯಮಿಗಳು, ಮಂಜಯ್ಯ ಶೆಟ್ಟಿ ಬೆಳ್ಳಾಡಿ ನಿವ್ರತ್ತ ಅಧಿಕಾರಿಗಳು ವಿಜಯ ಬ್ಯಾಂಕ್, ಬಿ.ಎಸ್ ಸುರೇಶ್ ಶೆಟ್ಟಿ ಉದ್ಯಮಿಗಳು ಉಪ್ಪುಂದ, ವಾದಿರಾಜ್ ಶೆಟ್ಟಿ ಉದ್ಯಮಿಗಳು ಉಪ್ಪುಂದ, ಸುಕುಮಾರ್ ಶೆಟ್ಟಿ ಉದ್ಯಮಿಗಳು ಉಪ್ಪುಂದ, ಶಿವರಾಮ ಶೆಟ್ಟಿ ಅಲ್ಛಾಡಿ ತುಂಬಿನಕೆರೆ, ಶೇಖರ್ ಖಾರ್ವಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕಿರಿಮಂಜೇಶ್ವರ, ರಘುರಾಮ ಶೆಟ್ಟಿ ಉದ್ಯಮಿಗಳು,
ಬಾಲಕ್ರಷ್ಣ ಶೆಟ್ಟಿ ಖಂಬದಕೋಣೆ, ರತ್ನಾಕರ್ ಶೆಟ್ಟಿ ಬವಲಾಡಿ, ಜಯಶೀಲ ಶೆಟ್ಟಿ ಕೈಲ್ ಕೇರಿ ಹಾಗು ಮಾಲೀಕರದ ಪ್ರಮೀಳಾ ಮತ್ತು ಪ್ರಕಾಶ್ ಶೆಟ್ಟಿ ಹಾಗು ಅವರ ಬಂಧುಗಳು ಉಪಸ್ಥಿತರಿದ್ದರು.

ಈಶ್ವರ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಖ್ಯಾತ ನಿರೂಪಕ ಸಂದೇಶ್ ಶೆಟ್ಟಿ ಸಳ್ವಾಡಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here