ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಜೆಸಿಐ ಕುಂದಾಪುರ ಸಿಟಿಯಾ ಪದ ಪ್ರದಾನ ಸಮಾರಂಭದಲ್ಲಿ ಸುಮಾರು 25 ವರ್ಷಗಳಿಂದ ಸಮಾಜ ಸೇವೆ ಯಲ್ಲಿ ತೊಡಗಿಸಿ ಕೊಂಡು ರಕ್ತದಾನ ಹಾಗು ರಕ್ತದಾನ ಶಿಬಿರ ಆಯೋಜನೆ ವಿವಿಧ ಸಂಘ ಸಂಸ್ಥೆ ಲಗಳ ಜೊತೆಗೂಡಿ ಮನೆ ನಿರ್ಮಾಣ, ಮದುವೆಗೆ ಸಹಕಾರ, ವೈದ್ಯಕೀಯಕ್ಕೆ ಸಹಕಾರ, ಶಿಕ್ಷಣದಲ್ಲಿ ವಂಚಿತರಾದವರನ್ನು ಮತ್ತೆ ಅವರನ್ನು ಕರೆ ತಂದು ಶಿಕ್ಷಣಕ್ಕೆ ಸಹಕಾರ, ಕೋವಿಡ್ 19 ಸಂದರ್ಭದಲ್ಲಿ ಸುಮಾರು 2ವರ್ಷಗಳ ಕಾಲ ಸುಮಾರು 15 ಸಾವಿರ ಜನರಿಗೆ ಹಸಿದವರಿಗೆ ಊಟ 7ಸಾವಿರ ಜನರಿಗೆ ಮಾಸ್ಕ್ ವಿತರಣೆ, 500 ಕುಟುಂಬ ಗಳಿಗೆ ರೇಶನ್ ಕಿಟ್ ಜೆಸಿಐ ಕುಂದಾಪುರ ಸಿಟಿಯಾ ಸಹಯೋಗದೊಂದಿಗೆ ವಿತರಣೆ, ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಆಯೋಜನೆ, ಸಾಧನೆ ಗೈದಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮ, ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮ ಮಾಡಿದ ಹಾಗು ಭಾರತೀಯ ಜೇಸಿಸ್ ನ ವಲಯ 15 ರ ಎಸ್ ಎಮ್ ಎ ವೈಸ್ ಛೇರ್ಮನ್ ಆಗಿ ಆಯ್ಕೆಗೊಂಡ ಹುಸೇನ್ ಹೈಕಾಡಿಯವರಿಗೆ ಕೋಟೇಶ್ವರ ದ ಸುಮೇದಾ ಓಪನ್ ಪಾರ್ಕ್ ನ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜನತಾ ಪಿ. ಯು.ಕಾಲೇಜ್ ನ ಆಡಳಿತ ನಿರ್ದೇಶಕರಾದ ಗಣೇಶ್ ಮೊಗವೀರ, ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಕೆ. ಕಾರ್ತಿಕೇಯ ಮಧ್ಯಸ್ತ, ವಲಯ ಉಪಾಧ್ಯಕ್ಷ ವಿಗ್ನೇಶ್ ಕಾರ್ಕಳ, ಪೂರ್ವ ಉಪಾಧ್ಯಕ್ಷ ಅಭಿಲಾಶ್, ನಿಕಟ ಪೂರ್ವ ಅಧ್ಯಕ್ಷ ಡಾ.ಸೋನಿ, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ಜಯಚಂದ್ರ ಶೆಟ್ಟಿ, ನಾಗೇಶ್ ನಾವಡ, ಪ್ರಶಾಂತ್ ಹವಾಲ್ದಾರ್, ಶ್ರೀಧರ್ ಸುವರ್ಣ, ಮಂಜುನಾಥ್ ಕಾಮತ್, ವಿಜಯ ಬಂಡಾರಿ, ಗಿರೀಶ್ ಹೆಬ್ಬಾರ್, ಚಂದ್ರಕಾಂತ್, ಜೇಸಿರೇಟ್ ಅಧ್ಯಕ್ಷೆ ರೇಷ್ಮಾ ಕೋಟ್ಯಾನ್, ಯುವ ಜೇಸಿ ಛೇರ್ಮನ್ ಕಿರಣ್, ಸದಸ್ಯರಾದ ಜಯಶೀಲ ಪೈ, ಸರೋಜ, ಪ್ರೇಮ, ಅನಿತಾ ಡಿ ಸೋಜಾ, ರಾಘವೇಂದ್ರ ಶೇಟ್, ಜಗದೀಶ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಸ್ವಾಗತಿಸಿ, ಕಾರ್ಯದರ್ಶಿ ಮಹಾರುದ್ರ ವಂದಿಸಿದರು,











