ಸಿದ್ದಾಪುರ ಶ್ರೀ ಸುಧೀಂದ್ರ ಟ್ರೇಡರ್ಸ್ ಸಂಸ್ಥೆಗೆ ಸಂಸ್ಥಾನ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರ ಭೇಟಿ

0
447

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯರ್ ಸ್ವಾಮೀಜಿಯವರು ಬಸ್ರೂರು ಶಾಖಾ ಮಠದ ಮುಕ್ಕಾಂನಿಂದ ಆಗಮಿಸಿ ಸಿದ್ದಾಪುರದ ಪ್ರಸಿದ್ಧ ಉದ್ಯಮ ಸಂಸ್ಥೆ ಶ್ರೀ ಸುಧೀಂದ್ರ ಟ್ರೇಡರ್ಸ್ ಗೆ ಭೇಟಿ ಮಾಡಿ ಆಶಿರ್ವಚನ ಮಾಡಿದರು. ಐರ್ಬೈಲ್ ರಾಮಚಂದ್ರ ನಾಯಕ ಕುಟುಂಬದವರು ಗುರುವರ್ಯರನ್ನು ಪೂರ್ಣ ಕುಂಭ ಸ್ವಾಗತ ಮಾಡಿ, ಪಾದಪೂಜೆ ಮಾಡಿ ಸ್ವಾಮಿಜಿಯವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.

ಸುಧೀಂದ್ರ ಟ್ರೇಡರ್ಸ್ ಅಡಿಕೆ, ಕಾಳು ಮೆಣಸು, ಗೇರು ಬೀಜ ಇತ್ಯಾದಿ ಗ್ರಾಮೀಣ ಬೆಳೆಗಳನ್ನು ಸ್ಥಳೀಯ ಬೆಳೆಗಾರರಿಂದ ಉತ್ತಮ ಬೆಲೆಗೆ ಖರೀದಿಸಿ ವ್ಯವಹಾರ ನಡೆಸುತ್ತಿದ್ದು ಜನಮನ್ನಣೆ ಗಳಿಸಿರುತ್ತದೆ. ಐರ್ಬೈಲ್ ನಾಯಕ್ ಕುಟುಂಬದವರ ಮನವಿಯನ್ನು ಮನ್ನಿಸಿ ಪರಮಪೂಜ್ಯ ಗುರುವರ್ಯರು ಆಗಮಿಸಿ ವ್ಯವಹಾರ ಉತ್ಪನ್ನಗಳ ದಾಸ್ತಾನು, ಬೆಟ್ಟೆ ಅಡಿಕೆಯ ವಿವಿಧ ಪ್ರಕಾರಗಳ ಅವಲೋಕನ ನಡೆಸಿ ಪ್ರಶಂಸಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಐರ್ಬೈಲ್ ನಾಯಕ್ ಕುಟುಂಬದವರಿಂದ ಗುರುಗಳಿಗೆ ಪಾದಪೂಜೆ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ರಾಮಚಂದ್ರ ನಾಯಕ ದಂಪತಿಗಳು ನಡೆಸಿದರು. ಮಕ್ಕಳಾದ ಉದ್ಯಮಿ ಶ್ರೀಕಾಂತ ನಾಯಕ್, ರಾಘವೇಂದ್ರ ನಾಯಕ್, ವಾಮನ ನಾಯಕ್ ದಂಪತಿ ಸಮೇತರಾಗಿ ಗುರುವರ್ಯರ ಆಶೀರ್ವಾದ ಪಡೆದರು. ಸಂಸ್ಥೆಯ ಮಾಲೀಕ ರಾಘವೇಂದ್ರ ನಾಯಕ್ ತನ್ನ ಬಂಧು ಮಿತ್ರರನ್ನು ಆಹ್ವಾನಿಸಿದ್ದರು. ಆಗಮಿಸಿದ ಸುಮಾರು ಇನ್ನೂರಕ್ಕೂ ಹೆಚ್ಚಿನ ಭಕ್ತರು ಗುರುವರ್ಯರ ಕೃಪೆಗೆ ಪಾತ್ರರಾದರು. ಸುಧೀಂದ್ರ ಟ್ರೇಡರ್ಸ್ ಸಂಸ್ಥೆಯ ವ್ಯವಹಾರ ಸಂಕೀರ್ಣದ ಕಟ್ಟಡದ ವಿಸ್ತರಣೆಯ ಸಂದರ್ಭದಲ್ಲಿ ಆಗಮಿಸಿದ ಗುರುವರ್ಯರು ಆಶೀರ್ವಚನ ನೀಡಿ ಸರ್ವರಿಗೂ ಫಲಮಂತ್ರಾಕ್ಷತೆ ನೀಡಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ದಿನೇಶ್ ಪ್ರಭು ಮಾಡಿದರು, ಸಿದ್ದಾಪುರ ಪಾಂಡುರಂಗ ಪೈ ಸ್ವಾಗತಿಸಿದರು.

Click Here

LEAVE A REPLY

Please enter your comment!
Please enter your name here