ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ದೇವಾಲಯದ ಹಿರಿಮೆ ಹೆಚ್ಚಿಸಿದ ಕೃಷ್ಣಾನಂದ ಚಾತ್ರ ಅವರನ್ನು ವ್ಯವಸ್ಥಾಪನ ಸಮಿತಿ ಪರವಾಗಿ ಅಭಿನಂದಿಸಲಾಯಿತು.
ಸಮಿತಿಯ ಮೂರು ವರುಷದ ಅವಧಿಯಲ್ಲಿ ಸಹಕಾರ ನೀಡಿದ ಭಕ್ತಾಭಿನಿಗಳಿಗೆ, ದಾನಿಗಳಿಗೆ ಅಧ್ಯಕ್ಷರು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸತೀಶ್ ಶೆಟ್ಟಿ,ಜಯಾನಂದ ಖಾರ್ವಿ, ವಿಶ್ವನಾಥ್ ಗರಡಿ ಮನೆ, ಸವಿತ ಜಗದೀಶ್, ವೀಣಾ ಪ್ರಕಾಶ್, ಸತೀಶ್, ನಾಗರಾಜ್ ರಾಯಪ್ಪನ ಮಠ, ದೇವಸ್ಥಾನದ ಗುರುರಾಜ್ ಹತ್ವಾರ್, ರಮೇಶ್ ಮೈಪಾಡಿ, ರಾಧಾಕೃಷ್ಣ, ದೀಕ್ಷಿತಾ ಸಾರಂಗ್, ನಿವೇದಿತಾ, ರಾಮ ರಾವ್ ಕನ್ನಂತ ಉಪಸ್ಥಿತರಿದ್ದರು.











