ಕುಂದಾಪುರ ಮಿರರ್ ಸುದ್ದಿ…


ಕೋಟ: ಇಲ್ಲಿನ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮಪಂಚಾಯತ್, ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಒಂದು ವಾರಗಳ ಬೇಸಿಗೆ ಶಿಬಿರ ಶಿಬಿರಾರ್ಥಿ ಪುಟಾಣಿಗಳ ಕಲರವ ಮೈಳೈಸಿತು.
ಉದ್ಘಾಟನೆಗೊಂಡ ದಿನದಿಂದ ಸಾಮಾನ್ಯವಾಗಿ ಒಂದನೇಯ ತರಗತಿ ಮಕ್ಕಳಿಂದ ಹಿಡಿದು 8ನೇ ತರಗತಿ ವರೆಗೆ ಶಿಬಿರಾರ್ಥಿ ಪುಟಾಣಿಗಳು ವಿವಿಧ ರೀತಿಯ ಚಟುವಟಿಯಲ್ಲಿ ತಮ್ಮ ಕ್ರೀಯಾಶೀಲತೆಯನ್ನು ಮೆರೆಯುವುದರೊಂದಿಗೆ ಕಲೆ, ಚಿತ್ರಕಲೆ, ನೃತ್ಯ, ಸಂಗೀತ, ಕವನ ರಚನೆ ಸೇರಿದಂತೆ ಪರಿಸರ ಜಾಗೃತಿ, ಸಾಹಿತ್ಯಿಕ ಚಟುವಟಿಕೆಗಳು ಶಿಬಿರದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.
ಮೊಬೈಲ್, ಟಿವಿ ತಂತ್ರಜ್ಞಾನ ಕಾಲಘಟ್ಟದಲ್ಲಿ ಮಕ್ಕಳನ್ನು ಒಂದೆಡೆ ಸೇರಿಸಿ ಅವರಿಗೆ ಬೇಕಾಗುವ ಉಪಯುಕ್ತ ಮಾಹಿತಿಯ ಜತೆಗೆ ಕ್ರೀಯಾಶೀಲತ್ವವನ್ನು ಮೈಗೂಡಿಸುವ ಕಾರ್ಯಕ್ರಮ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು.
ಸರಕಾರಿ ಕಾರ್ಯಕ್ರಮ
ಗ್ರಂಥಾಲ ಏರ್ಪಡಿಸಿದ ಈ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವಾದರೂ ಖಾಸಗಿ ಶಿಬಿರಕ್ಕೆ ಸರಿಸಾಟಿ ಇಲ್ಲ ಎನ್ನುವಂತೆ ಮೈಳೈಸಿತು.ಮೇ ತಿಂಗಳ ರಜಾ ದಿನಗಳಲ್ಲಿ ಪುಟಾಣಿಗಳು ಶಿಬಿರವನ್ನು ಅರ್ಥಪೂರ್ಣವಾಗಿ ಕಳೆದರು. ಮಕ್ಕಳ ಮನೆಯವರಂತು ಸಮಾರೋಪದಲ್ಲಿ ಗ್ರಂಥಪಾಲಕಿ ಸೇರಿದಂತೆ ಆಯೋಜಕ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಮಕ್ಕಳ ಮನೋವಿಕಾಸಕ್ಕೆ ನಾಂದಿ
ಸಮಾರೋಪ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲ ಪಾಂಡೇಶ್ವರ ಇದರ ಕಾರ್ಯದರ್ಶಿ ಜ್ಞಾನೇಶ್ವರಿ ಉಡುಪ ಮಾತನಾಡಿ ಮಕ್ಕಳ ಮನೋವಿಕಾಸಕ್ಕೆ ಶಿಬಿರಗಳು ಸಹಕಾರಿ ಪ್ರಸ್ತುತ ಆಂಗ್ಲ ಮಾಧ್ಯಮದ ವ್ಯಾಮೂಹದ ನಡುವೆಯೂ ಕನ್ನಡ ಮಾಧ್ಯಮದ ಮಕ್ಕಳ ಕ್ರೀಯಾಶೀಲತೆ ಅತ್ಯದ್ಭುತ, ಶಿಬಿರಗಳು ಸಾಹಿತಿಕ ಕೇಂದ್ರವಾಗಿ ಮಕ್ಕಳಲ್ಲಿ ಓದುವ ಹವ್ಯಾಸಕ್ಕೆ ನಾಂದಿಯಾಗಬೇಕು, ಮೊಬೈಲ್ ಗಳಿನಿಂದ ಹೊರಬರಬೇಕಾದರೆ ಇಂಥಹ ಶಿಬಿರಗಳು ಬಹುಪಾತ್ರ ವಹಿಸುತ್ತವೆ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಾಂಡೇಶ್ವರ ಗ್ರಾಮಪಂಚಾಯತ್ ಉಪಾಧ್ಯಕ್ಷ ವೈ ಬಿ ರಾಘವೇಂದ್ರ, ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆ ಯಡಬೆಟ್ಟು ಇದರ ಮುಖ್ಯ ಶಿಕ್ಷಕಿ ಇಂದಿರಾ, ಸಂಜೀವಿನಿ ಒಕ್ಕೂಟದ ಕವಿತಾ, ಪಾಂಡೇಶ್ವರ ಮಹಿಳಾ ಮಂಡಲದ ಅಧ್ಯಕ್ಷೆ ಸಂಪನ್ಮೂಲ ವ್ಯಕ್ತಿ ಸುಮಿತ್ರ ಸುಧಾಕರ್ ,ಗ್ರಂಥಪಾಲಕಿ ಜ್ಯೋತಿ , ಸಂಜೀವಿನಿ ಒಕ್ಕೂಟದ ಉಷಾ ಗಣೇಶ್ ಪೂಜಾರಿ, ಪಾಂಡೇಶ್ವರ ಗ್ರಾ.ಪಂ ಸದಸ್ಯೆ ಸುಜಾತ ವೆಂಕಟೇಶ ಇದ್ದರು.











