ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಸಮುದಾಯದವರಿಗೆ 8 ಹೊಸ ಮನೆ ನಿರ್ಮಾಣದ ಸಮಿತಿಗೆ ಇತ್ತೀಚಿಗೆ ಕೋಟ ಜಾಮಿಯಾ ಮಸೀದಿಯಿಂದ 25,000 ರೂಪಾಯಿಯ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೋಟ ಜಾಮಿಯ ಮಸೀದಿ ಅಧ್ಯಕ್ಷ ಕೆ.ಎಂ ಸಲೀಂ ಮಾತನಾಡಿ ಸಮಿತಿಯ ಸದಸ್ಯರೆಲ್ಲರೂ ತುಂಬು ಸಂತೋಷದಿಂದ ಈ ಮೊತ್ತವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಕಾರ ನೀಡುವುದಾಗಿ ಹೇಳಿದರಲ್ಲದೆ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರಿಗೆ 8 ಮನೆಗಳನ್ನು ಕಟ್ಟಿಕೊಡುವ ಕೋಟತಟ್ಟು ಗ್ರಾಮ ಪಂಚಾಯಿತನ ಈ ಕಾರ್ಯ ಪ್ರಶಂಸನೆಯ ಎಂದರು.
ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ ,ಸದಸ್ಯೆ ಸೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್,ಮಸೀದಿ ಕಾರ್ಯದರ್ಶಿ ಬಶೀರ್, ಉಪಾಧ್ಯಕ್ಷ ವಾಹಿದ್ ಆಲಿ , ಕೋಶಾಧಿಕಾರಿ ಅಬ್ದುಲ್ ಬಸಿರ್ ಸದಸ್ಯರಾದ ಅಬ್ದುಲ್ ಸಿರಾಜ್ ಬಾರಿಕೆರೆ, ಇಬ್ರಾಹಿ ಪಡುಕೆರೆ ಹಾಗೂ ಚಿಟ್ಟಿಬೆಟ್ಟು ಫಲಾನುಭವಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.











