ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ರಾಜ್ಯದ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ 54 ವರ್ಷಗಳ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಸಮರ್ಥ ನಾಯಕರೊಬ್ಬರು ಪ್ರಚಂಡ ಬಹುಮತದಿಂದ 2027-29 ರ ಸಾಲಿಗೆ ರಾಜ್ಯಾಧ್ಯಕ್ಷರಾಗಿ ಡಾ. ನಿಕಿನ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ KGMOA ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘ ಕುಂದಾಪುರದ ಅಧ್ಯಕ್ಷ ಡಾ. ನಾಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲಾ KGMOA ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಒಂದು ಸಾಧನೆ. 20 ದಿವಸಗಳಲ್ಲಿ 27 ಜಿಲ್ಲೆಗಳ ಪ್ರವಾಸ ಮಾಡಿ, ಸಂಘದ ಸದಸ್ಯರ ಒಲವು ಮತ್ತು ನಂಬಿಕೆಯನ್ನು ಗಳಿಸುವ ನಿಟ್ಟಿನಲ್ಲಿ ಅವರು ಪಟ್ಟಿರುವ ಶ್ರಮ ಶ್ಲಾಘನೀಯ.
ಅವರೊಂದಿಗೆ ಕೈ ಜೋಡಿಸಿದ ಕೋರ್ ಸಮಿತಿಯ ಸರ್ವ ಸದಸ್ಯರು ಅಭಿನಂದನಾರ್ಹರು. ಈ ಗೆಲುವಿನ ಗುರಿ ಸಾಧಿಸುವಲ್ಲಿ ಶ್ರಮಿಸಿದ ಉಡುಪಿ ಜಿಲ್ಲಾ KGMOA ಸರ್ವ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ ಅವರು, ಈ ವಿಜಯವು ಉಡುಪಿ ಜಿಲ್ಲಾ ಸಂಘದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಡಾ. ನಿಕಿನ್ ಶೆಟ್ಟಿಯವರ ಸಂಘವನ್ನು ಬಲಗೊಳಿಸುವ ಹೋರಾಟದಲ್ಲಿ ನಾವೆಲ್ಲರು ಅವರ ಜೊತೆ ಕೈಜೋಡಿಸೋಣ ಎಂದು ಡಾ. ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











