ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ವಡೇರ ಹೋಬಳಿಯ ಫಣಿರಾಜ ನಾವುಡ ತೇರ್ಗಡೆ ಆಗಿರುತ್ತಾರೆ. ಅವರು ಬೆಂಗಳೂರಿನ A. R. T. S.& Co ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ವಿದ್ಯಾರ್ಥಿಯಾಗಿದ್ದರು.
ವಡೇರ ಹೋಬಳಿಯ ಉದಯಶಂಕರ ನಾವುಡ ಹಾಗೂ ಮಾಲತಿ ( ಉಷಾ )ಇವರ ಪುತ್ರರಾಗಿದ್ದು, ಕುಂದಾಪುರದ ಬೋರ್ಡ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿರುತ್ತಾರೆ.











