ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಆಸ್ಕರ್ ಫೆರ್ನಾಂಡಿಸ್ ರವರ ಸರಳ ವ್ಯಕ್ತಿತ್ವ, ಸೇವಾ ಮನೋಭಾವನೆ , ಪ್ರಾಮಾಣಿಕ ಪಕ್ಷ ನಿಷ್ಠೆ,ದೂರ ದೃಷ್ಟಿಯ ನಾಯಕತ್ವ, ಅವರನ್ನು ಸಾಮಾನ್ಯ ವ್ಯಕ್ತಿಯಿಂದ ಬೆಳೆದು ಕರಾವಳಿ ಭಾಗದ ಧೀಮಂತ ನಾಯಕರಾಗಿ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಹೆಸರು ತಂದರು. ಕೇಂದ್ರ ಸಚಿವರಾದ ಅವರು ಬಿಟ್ಟು ಹೋಗಿರುವ ಹೆಜ್ಜೆ ಗುರುತು ಗುರುತು ಯಾರು ಮರೆಯುವಂತಿಲ್ಲ , ಸದಾ ಅಧ್ಯಯನಶೀಲರಾದ ಅವರು ಸಾಕಷ್ಟು ಜನಾನುರಾಗಿಯಾಗಿದ್ದರು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಪ್ರತಾಪ್ ಚಂದ್ರ ಶೆಟ್ಟಿ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫೆರ್ನಾಂಡಿಸ್ ರವರ ನಾಲ್ಕನೇ ವರ್ಷದ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ , ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ , ನ್ಯಾಯವಾದಿ ಕೆರಾಡಿ ಪ್ರಸನ್ನ ಕುಮಾರ್ ಶೆಟ್ಟಿ , ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ ಶ್ರದ್ಧಾಂಜಲಿಯ ಮಾತುಗಳನ್ನಾಡಿದರು.
ಸಭೆಯಲ್ಲಿ ಬೆಳ್ವೆ ವ್ಯವಸಾಯ ಸೇವಾ ಸೊಸೈಟಿಯ ಅಧ್ಯಕ್ಷರಾದ ಜಯರಾಮ ಶೆಟ್ಟಿ , ನಗರ ಕಾಂಗ್ರೆಸ್ ಅಧ್ಯಕ್ಷರಾದ ಗಣೇಶ್ ಶೇರಿಗಾರ್, ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ , ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ , ಪಂಚಾಯತ್ ಅಧ್ಯಕ್ಷರುಗಳಾದ ಸವಿತಾ, ಗಣಪತಿ ಶೇಟ್ , ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಹಿರಿಯರಾದ ಮೋಹನದಾಸ್ ಶೆಟ್ಟಿ, ಕೆಡಿಪಿ ಸದಸ್ಯರಾದ ರಮೇಶ್ ಶೆಟ್ಟಿ , ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್ ,ಪ್ರಭಾವತಿ ಶೆಟ್ಟಿ, ಅಶೋಕ್ ಸುವರ್ಣ, ಪಂಚಾಯತ್ ಸದಸ್ಯರಾದ ಗೀತಾ ,ಚೈತ್ರ ಅಡಪ , ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್ , ಗ್ಯಾರಂಟಿ ಸಮಿತಿಯ ಸದಸ್ಯರಾದ ಗಣೇಶ್ ವಿ , ಆಶಾ ಕರ್ವಾಲ್ಲೊ, ಕೊಡಿ ಸುನಿಲ್ ಪೂಜಾರಿ, ಜ್ಯೋತಿ ಡಿ ನಾಯ್ಕ್ , ಮಧುಕರ , ಸುಧೀಂದ್ರ , ರಿಯಾಜ್ ಕೊಡಿ , ಜೋಸೆಫ್ ರೆಬೆಲ್ಲೊ, ಅಲ್ಫಾಜ್ , ದಿನೇಶ್ ಬೆಟ್ಟ ,ರತ್ನಾಕರ ಶೆಟ್ಟಿ ,ಶ್ರೀಧರ ಶೆಟ್ಟಿ ,ವಿವೇಕಾನಂದ , ಪ್ರಭಾಕರ ಕಡ್ಗಿಮನೆ , ಅರುಣ್ ಪಟೇಲ್ , ರಾಕೇಶ್ ಶೆಟ್ಟಿ , ಜೋಯ್ಟನ್ ಡಿಸೋಜಾ ,ನಿಹಾದ್ ಶೆಟ್ಟಿ , ಎಡಾಲ್ಫ್ ಡಿಕೋಸ್ಟ , ವೇಲಾ ಬ್ರಗಾಂಜ , ಗಿರೀಶ್ ಭಟ್ ,ರಾಘವೇಂದ್ರ ಕಂದಾವರ ,ಅನಿಲ್ ಕೆ , ವಿನಾಯಕ ರಾವ್ ಇನ್ನಿತರರು ಉಪಸ್ಥಿತರಿದ್ದರು.











