ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಬಲಿಷ್ಠ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ಭಾರತದ ಶಿಲ್ಪಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತ ಅವಧಿಯಲ್ಲಿ ಬಾಹ್ಯ ಮತ್ತು ಆಂತರಿಕ ಶತ್ರುಗಳ ವಿರುದ್ಧ ದುರ್ಗೆಯಂತೆ ಹೋರಾಡಿ ಹುತಾತ್ಮರಾದರು. ಬಡತನ ಮತ್ತು ಅಸಮಾನತೆಯ ನಿರ್ಮೂಲನೆಗಾಗಿ ಅವರು ಹಮ್ಮಿಕೊಂಡ ಕಾರ್ಯಕ್ರಮಗಳು ಇಂದಿಗೂ ಮಾದರಿಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಯಾಡಿ ಶಿವರಾಮ ಶೆಟ್ಟಿ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಗೃಹ ಸಚಿವರಾದ ಪಟೇಲರು ಸ್ವಾತಂತ್ರ್ಯ ಹೋರಾಟದಲ್ಲಿ ಮಂಚೂಣಿಯಲ್ಲಿದ್ದು, ಸ್ವಾತಂತ್ರ್ಯ ನಂತರ ದೇಶವನ್ನು ಆಳುತ್ತಿದ್ದ ರಾಜ್ಯ ಸಂಸ್ಥಾನದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿ, ಭಾರತೀಯ ಪ್ರಜೆಗಳ ನೆಮ್ಮದಿಯ ಬದುಕಿಗೆ ಅಡಿಪಾಯ ಹಾಕಿದರು ಎಂದರು.
ಸಭೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ , ಐಟಿ ಸೆಲ್ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ , ಪಂಚಾಯತ್ ಅಧ್ಯಕ್ಷರುಗಳಾದ ಗಣಪತಿ ಶೇಟ್, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಅಬ್ಬು ಮೊಹಮದ್, ಪ್ರಭಾವತಿ ಶೆಟ್ಟಿ , ಶಶಿ ರಾಜ್ ಪೂಜಾರಿ, ಅಶೋಕ್ ಸುವರ್ಣ, ಶಶಿಧರ ಕೋಟೆ, ಸದಾನಂದ ಖಾರ್ವಿ, ಪಂಚಾಯತ್ ಸದಸ್ಯರಾದ ಸುರೇಶ್ ನಾಯಕ್ ಆನಗಳ್ಳಿ, ಗೀತಾ ಆನಗಳ್ಳಿ, ರೋಷನ್ ಬರೆಟ್ಟೊ, ಜೆಸಿಂತಾ ಡಿಮೆಲ್ಲೊ, ಬ್ಲಾಕ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಮುನಾಫ್ ಕೊಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ, ತಾಲೂಕು ಕೆ ಡಿ ಪಿ ಸದಸ್ಯ ವಿಜಯ ಕೆ ವಿ, ಅಕ್ರಮ-ಸಕ್ರಮ ಸಮಿತಿಯ ಸದಸ್ಯರಾದ ಜಾನಕಿ ಬಿಲ್ಲವ, ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಠಲ ಕಾಂಚನ್, ನಾಗರಾಜ್ ನಾಯಕ್, ಸೀಮಾ ಚಂದ್ರ ಪೂಜಾರಿ , ದಿನೇಶ್ ಬೆಟ್ಟ, ಜಿಲ್ಲಾ ಸೇವಾದಳ ಕಾರ್ಯದರ್ಶಿ ಜ್ಯೋತಿ ನಾಯಕ್, ಜಿಲ್ಲಾ ಅಲ್ಪಸಂಖ್ಯಾತ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ, ನಗರ ಪ್ರಾಧಿಕಾರ ಸದಸ್ಯ ಅಲ್ಫಾಜ್, ಯುವ ಮುಖಂಡ ಕೊಡಿ ಸುನಿಲ್ ಪೂಜಾರಿ, ದೀಕ್ಷಿತ್ ಸೂಡಾ, ಅರುಣ್ ಪಟೇಲ್, ಕುಮಾರ ಖಾರ್ವಿ, ರಿಯಾಜ್ ಕೋಡಿ , ವಿವೇಕಾನಂದ, ವೇಲಾ ಬ್ರಗಾಂಜ, ಮುನಾವರ ಕೊಡಿ , ಕೆ ಎಸ್ ವಿಜಯ , ಕ್ಲಿಫರ್ಡ್ ಡಿಸಿಲ್ವಾ , ಲಕ್ಷ್ಮಣ ಬರೆಕಟ್ಟು , ನಿತಿನ್ ಡಿಸೋಜಾ , ಶಶಿ ಬಳ್ಕೂರು, ಜೊಯ್ ರೆಬೆಲ್ಲೊ , ಮೊಹಮ್ಮದ್ ಸಾಯರ್ ಕೊಡಿ, ನವೀನ್, ಎಡೊಲ್ಫ್ ಡಿಕೋಸ್ತಾ ಇನ್ನಿತರರು ಉಪಸ್ಥಿತರಿದ್ದರು.











