ಗುಲ್ವಾಡಿ :ಶೆಟ್ರಕಟ್ಟೆ ತಿರುವಿನ ಬಳಿ ಖಾಸಗಿ ಬಸ್ಸಿಗೆ ವೇಗವಾಗಿ ಬಂದ ಬೈಕ್ ಮುಖಾಮುಖಿ ಡಿಕ್ಕಿ -ಬೈಕ್ ಸವಾರ ಸಾವು

0
816

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೆಟ್ರಕಟ್ಟೆ ತಿರುವಿನ ಬಳಿ ಖಾಸಗಿ ಬಸ್ಸಿಗೆ ವೇಗವಾಗಿ ಬಂದ ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.

Click Here

ಸೌಕೂರು ನಿವಾಸಿ ವಿಜಯ (38ವರ್ಷ) ಮೃತ ದುರ್ದೈವಿ.
ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದ ವಿಜಯ್ ಬೇರೆ ತಿನಿಸುಗಳನ್ನು ತಯಾರಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಕುರುಕಲು ತಿಂಡಿಗಳನ್ನು ಅಂಗಡಿಗಳಿಂಗೆ ಕೊಟ್ಟು ಹೇರಿಕುದ್ರುವಿನಿಂದ ಸೌಕೂರಿನಲ್ಲಿರುವ ಮನೆಗೆ ಹೊರಟಿದ್ದರು. ಶೆಟ್ರಕಟ್ಟೆ ತಿರುವಿನಲ್ಲಿ ಓವರ್ ಟೆಕ್ ಮಾಡಿ ಮುನ್ನುಗ್ಗಿದಾಗ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು, ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ವಿಜಯ ಶ್ರಮಜೀವಿಯಾಗಿದ್ದು ಅವಿವಾಹಿತರಾಗಿದ್ದರು.

ಅಪಘಾತದ ದೃಶ್ಯಗಳು ಬಸ್ಸಿನದಲ್ಲಿದ್ದ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ.

Click Here

LEAVE A REPLY

Please enter your comment!
Please enter your name here