ಕೋಡಿ-ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಸ್ಕೋಡ್ವೇಸ್ ಸಂಸ್ಥೆ ಇವರ ಸಹಯೋಗದಲ್ಲಿ ಉತ್ಪಾದಕ ರೈತ ಉತ್ಪಾದಕ ಕಂಪನಿಯ ಬಗ್ಗೆ ಮಾಹಿತಿ ಕಾರ್ಯಗಾರ

0
659

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಮೀನುಗಾರ ರೈತ ಬಾಂಧವರಿಗೆ ರೈತ ಉತ್ಪಾದಕ ಕಂಪನಿಯ ಬಗ್ಗೆ ಮತ್ತು ಕಂಪನಿಯ ಷೇರುದಾರರಿಗೆ ಷೇರಿನ ಮಾಹಿತಿ ಮತ್ತು ಸಿಗುವಂತಹ ಸೌಲಭ್ಯಗಳ ಮಾಹಿತಿ ಕಾರ್ಯಗಾರ ಶುಕ್ರವಾರ ಕೋಡಿಯಲ್ಲಿ ನಡೆಯಿತು.

ಉಡುಪಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಕುಮಾರ್ ಮಾತನಾಡಿ ರೈತ ಉತ್ಪಾದಕ ಕಂಪನಿಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

Click Here

ಹಾಗೆಯೇ ಸ್ಕೋಡವೆಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನೀಲಕಂಠ ಶೇಷಗಿರಿ ಮೀನುಗಾರರಿಗೆ ಸಸಿ ವಿತರಿಸಿ ಮಾಹಿತಿ ನೀಡಿದರು. ಈ ವೇಳೆ ರೈತ ಆಸಕ್ತ ಗುಂಪು ಮತ್ತು ರೈತ ಮಹಿಳಾ ಮೀನುಗಾರರಿಗೆ ಮಹಿಳಾ ಸ್ವಾವಲಂಬಿ ಯೋಜನೆ ಬಗ್ಗೆ ಮಾಹಿತಿ ಮತ್ತು ಮಹಿಳಾ ಗುಂಪು ರಚನೆಗೊಂಡಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಗೀತಾ ಖಾರ್ವಿ, ಉಡುಪಿ ಕಿನಾರ ಉತ್ಪಾದಕ ಕಂಪನಿಯ ಅಧ್ಯಕ್ಷ ಲೋಹಿತ್ ಖಾರ್ವಿ, ನಿರ್ದೇಶಕ ಹರೀಶ್ ಕುಂದರ್, ಮಾಲತಿ ಎಸ್ ಮೆಂಡನ್, ಕಾರ್ಯ ನಿರ್ವಾಹಕ ಅಧಿಕಾರಿ ಸುದಿನ ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿ ಭೂಮಿಕಾ ಅವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here