Category: ಸುದ್ದಿ

  • ಕೋಟ :ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಂದ ಕೋಡಿ ಗ್ರಾಮಸ್ಥರ ಅಹವಾಲು ಸ್ವೀಕಾರ

    ಕೋಟ :ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಂದ ಕೋಡಿ ಗ್ರಾಮಸ್ಥರ ಅಹವಾಲು ಸ್ವೀಕಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬಹುದಿನಗಳ ವಿವಿಧ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಶುಕ್ರವಾರ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಆಲಿಸಿದರು.
    ಈ ವೇಳೆ ಮಾತನಾಡಿದ ಸ್ಥಳೀಯ ಬಿಜೆಪಿ ಮುಖಂಡ ಮಹಾಬಲ ತಿಂಗಳಾಯ ಕೋಡಿ ಗ್ರಾಮದಲ್ಲಿ ಕೃಷಿಭೂಮಿಗೆ ಸಾಕಷ್ಟು ವರ್ಷಗಳಿಂದ ಉಪ್ಪು ನೀರು ನುಗ್ಗುತ್ತಿದ್ದು ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು, ಸಾಸ್ತಾನದಿಂದ ಕೋಡಿ ಸಂಪರ್ಕಿಸುವ ರಸ್ತೆ ಅಗಲಿಕರಣ ಅಭಿವೃದ್ಧಿ ಕುರಿತು, ಕೋಡಿ ಮಹಾಸತೀಶ್ಚರಿ ದೇಗುಲ ಎದುರು ಇರುವ ಬೀಚ್ ರಸ್ತೆ ಅಭಿವೃದ್ಧಿಗೊಳಿಸುವುದು, ಸ್ಥಳೀಯ ಎರಡು ಕೊಳ ಹುಳೇತ್ತುವುದು, ಕೋಡಿ ತಲೆ ಸ್ಮಶಾನ ನಿರ್ಮಿಸುವ ಕುರಿತು,ಇಲ್ಲಿನ ಸಿಆರ್ ಝಡ್ ಸಮಸ್ಯೆ, ಕೋಡಿ ಕಡಲ್ಕೊರೆತ ಶಾಶ್ವತ ಪರಿಹಾರ ಸೇರಿದಂತೆ ಕೋಡಿ ಬಂದರು ಅಭಿವೃದ್ಧಿ ಪಡಿಸುವ ಕುರಿತು ಸಭೆಯಲ್ಲಿ ಶಾಸಕರೊಂದಿಗೆ ಚರ್ಚಿಸಿದರು.

    ಶಾಸಕರ ಭರವಸೆ…
    ಈ ಎಲ್ಲಾ ಸಮಸ್ಯೆಗಳ ಕುರಿತಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಅಲ್ಲದೆ ತಾತ್ಕಾಲಿಕ ಕೆಲ ಕಾಮಗಾರಿ ಕೈಗೆತ್ತಿಕೊಳ್ಳವ ಬಗ್ಗೆ ಸಭೆಯಲ್ಲಿ ಪ್ರಾಸ್ತಾಪಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ , ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ,ಪೂರ್ವಾಧ್ಯಕ್ಷ ಸದಸ್ಯ ಪ್ರಭಾಕರ್ ಮೆಂಡನ್, ಮುಖಂಡರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಸುಧೀರ್ ಕುಂದರ್ ನಿರೂಪಿಸಿದರು.

  • ಕುಂದಾಪುರ: ಕೊಚುವೇಲಿ-ಮುಂಬೈ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ – ಬಿಜೆಪಿಯಿಂದ ಹರ್ಷ

    ಕುಂದಾಪುರ: ಕೊಚುವೇಲಿ-ಮುಂಬೈ ರೈಲಿಗೆ ಕುಂದಾಪುರದಲ್ಲಿ ನಿಲುಗಡೆ – ಬಿಜೆಪಿಯಿಂದ ಹರ್ಷ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮಧ್ಯಾಹ್ನ ಕುಂದಾಪುರ ತಲುಪುವ ಕೊಚುವೇಲಿ-ಮುಂಬೈ ಲೋಕಮಾನ್ಯ ತಿಲಕ್ ರೈಲಿಗೆ ಗುರುವಾರದಿಂದ ನಿಲುಗಡೆ ಘೋಷಣೆಯಾಗಿದ್ದು, ಮಧ್ಯಾಹ್ನ ಕುಂದಾಪುರ ಮೂಡ್ಲಕಟ್ಟೆ ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದರು.

    ಈ ಸಂದರ್ಭ ಮಾತನಾಡಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಹೋರಾಟದ ಫಲ ಮತ್ತು ಜನರ ಬೇಡಿಕೆಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಸ್ಪಂದಿಸಿದ ಪರಿಣಾಮ ರೈಲು ನಿಲುಗಡೆಯಾಗಿದೆ ಎಂದರು.

    ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಸುಧೀರ್ ಕೆ.ಎಸ್. ಕುಂದಾಪುರ ಯುವಮೋರ್ಚ ಅಧ್ಯಕ್ಷ ಅವಿನಾಶ್ ಉಳ್ತೂರು, ರೈಲ್ವೆ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ವಿವಿಧ ಮೋರ್ಛಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ಮೊದಲಾದವರು ಉಪಸ್ಥಿತರಿದ್ದರು.

  • ಕೋಟ :ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವ ಸಂಪನ್ನ

    ಕೋಟ :ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವ ಸಂಪನ್ನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹರ್ತಟ್ಟು, ಗಿಳಿಯಾರು ಕೋಟ ಇದರ ಪ್ರಥಮ ವರ್ಷದ ವರ್ಧಂತ್ಯೋತ್ಸವ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು. ಪ್ರಥಮ ವರ್ಧಂತಿ ಉತ್ಸವದ ಅಂಗವಾಗಿ ವೇ.ಮೂ.ಸುಧೀರ್ ಐತಾಳ್ ನೇತೃತ್ವದಲ್ಲಿ ತಂತ್ರಿಗಳಾದ ಮಣಿಕಲ್ ಮಂಜುನಾಥ ಉಡುಪ ಪೌರೋಹಿತ್ಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ನವಕ ಪ್ರಧಾನ ದ್ರವ್ಯ ಕಲಶ ಕಲಾತತ್ವ ಹೋಮ ಕಲಶಾಭಿಷೇಕ, ಮಹಾಪೂಜೆ,ಅಪರಾಹ್ನ ಸಾರ್ವಜನಿಕ ಅನ್ನಸಂತರ್ಪಣೆ
    ಸಂಜೆ ರಂಗಪೂಜೆ, ಪಂಚವರ್ಣ ಮಹಿಳಾ ಮಂಡಳ ಭಜನಾ ತಂಡ ಕೋಟ ಇವರಿಂದ ಭಜನಾ ಕಾರ್ಯಕ್ರಮಗಳು ಜರಗಿದವು.

    ಧಾರ್ಮಿಕ ವಿಧಿವಿಧಾನದಲ್ಲಿ ದೇಗುಲದ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ ದಂಪತಿಗಳು,ಜಿ.ಗೋಪಾಲಕೃಷ್ಣ ಮಯ್ಯ ದಂಪತಿಗಳು ಭಾಗಿಯಾದರು.

    ದೇಗುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಹರೀಷ್ ದೇವಾಡಿಗ, ,ಸ್ಥಳೀಯರಾದ ವಾಸುದೇವ ಮಯ್ಯ,ಚಂದ್ರಿಕ ಭಟ್ ಸಿದ್ಧ(ಶ್ರೀಧರ) ದೇವಾಡಿಗ,ತಿಮ್ಮ ಕಾಂಚನ್,ಚಂದ್ರ ಹಾಡಿಕೆರೆ,ಬಾಬು ಶೆಟ್ಟಿ,ನಾಗರಾಜ್ ಗಾಣಿಗ,ಗಿರೀಶ್ ದೇವಾಡಿಗ,ದೇಗುಲದ ಸೇವಾ ಸಮಿತಿಯ ಶೇಖರ್ ದೇವಾಡಿಗ,ಪ್ರದೀಪ ದೇವಾಡಿಗ ,ಕೀರ್ತೀಶ್ ಪೂಜಾರಿ,ದಿನೇಶ್ ದೇವಾಡಿಗ,ಪ್ರಶಾಂತ್ ದೇವಾಡಿಗ,ಶಾಂತಾ ಆಚಾರ್,ಗುಲಾಬಿ ಪೂಜಾರಿ,ಜಗದೀಶ್ ದೇವಾಡಿಗ,ದಿನೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

  • ಜೆಇಇ ಮೈನ್ಸ್ B.Arch ಪರೀಕ್ಷೆಯಲ್ಲಿ 99.744 ಪರ್ಸಂಟೈಲ್ ಫಲಿತಾಂಶದೊಂದಿಗೆ ಅಪ್ರತಿಮ ಸಾಧನೆ ಮೆರೆದ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ಅಲಕಾ ಹೆಬ್ಬಾರ್.

    ಜೆಇಇ ಮೈನ್ಸ್ B.Arch ಪರೀಕ್ಷೆಯಲ್ಲಿ 99.744 ಪರ್ಸಂಟೈಲ್ ಫಲಿತಾಂಶದೊಂದಿಗೆ ಅಪ್ರತಿಮ ಸಾಧನೆ ಮೆರೆದ ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನ ಅಲಕಾ ಹೆಬ್ಬಾರ್.

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ: ರಾಷ್ಟ್ರ ಮಟ್ಟದಲ್ಲಿ ನಡೆದ ಜೆಇಇ ಮೈನ್ಸ್ B.Arch ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲಕಾ ಹೆಬ್ಬಾರ್ 99.744 ಫಲಿತಾಂಶದೊಂದಿಗೆ ಅಗ್ರಗಣ್ಯ ಸಾಧನೆ ಮೆರೆದಿದ್ದಾಳೆ.

    ಕಾಲೇಜು ಪ್ರಾರಂಭದ ದ್ವಿತೀಯ ವರ್ಷದಲ್ಲೇ ಅಪ್ರತಿಮ ಸಾಧನೆ ಮೆರೆದ ವಿದ್ಯಾರ್ಥಿನಿ, ಗ್ರಾಮೀಣ ಭಾಗದ ಪರಿಸರದಲ್ಲಿ ಆರಂಭಗೊಂಡಿರುವ ಶಿಕ್ಷಣ ಸಂಸ್ಥೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿ ನೀಡುತ್ತಾ ಉತ್ತಮ ಶಿಕ್ಷಣ ನೀಡುತ್ತಿದೆ.

    ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

  • ಕುಂದಾಪುರ :ಪ್ರಬಂಧ ಸ್ಪರ್ಧೆ- ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಕಾಂಕ್ಷ ಎಸ್.ಪೈ ತೃತೀಯ ಸ್ಥಾನ

    ಕುಂದಾಪುರ :ಪ್ರಬಂಧ ಸ್ಪರ್ಧೆ- ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಆಕಾಂಕ್ಷ ಎಸ್.ಪೈ ತೃತೀಯ ಸ್ಥಾನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ :ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಜಿಲ್ಲೆ ಇವರು ನಡೆಸಿದ ೨೧ನೇ ಶತಮಾನದ ಆತಂಕಗಳು ಮತ್ತು ಗಾಂಧೀಜಿಯವರ ವಿಚಾರಗಳು ಪ್ರತಿಪಾದಿಸುವ ಪರಿಹಾರಗಳು ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಆಕಾಂಕ್ಷ ಎಸ್.ಪೈ ಅವರು ತೃತೀಯ ಸ್ಥಾನ ಪಡೆದಿರುತ್ತಾರೆ.
    ಇವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಭೋದಕ-ಭೋದಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

     

  • ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟದ ದಿನೇಶ್ ಗಾಣಿಗರಿಗೆ ಹುಟ್ಟೂರ ಸ್ವಾಗತ

    ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟದ ದಿನೇಶ್ ಗಾಣಿಗರಿಗೆ ಹುಟ್ಟೂರ ಸ್ವಾಗತ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಪಟು ಕೋಟದ ದಿನೇಶ್ ಗಾಣಿಗ ಸೋಮವಾರ ಹುಟ್ಟೂರಿಗೆ ಆಗಮಿಸಿದರು.

    ಇತ್ತೀಚಿಗೆ ಥೈಲ್ಯಾಂಡ್ ರಾಜಬುಟದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಮೂರು ಪದಕ ವಿಜೇತರಾಗಿದ್ದರು.
    ಹುಟ್ಟೂರು ಉಡುಪಿ ಜಿಲ್ಲೆಯ ಕೋಟ ಕ್ಕೆ ಆಗಮಿಸಿ ಶ್ರೀ ಕ್ಷೇತ್ರ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಭವ್ಯ ಸ್ವಾಗತ ಕೋರಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪರವಾಗಿ ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಶಾಲು ಹೊದಿಸಿ ಗೌರವಿಸಿದರು.
    ಕೋಟ ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕೋಟ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ತಾರಾನಾಥ್ ಪೂಜಾರಿ, ಸಂದೀಪ್ ಕದ್ರಿಕಟ್ಟು, ಪಂಚವರ್ಣದ ಗಿರೀಶ್ ಆಚಾರ್, ನರಸಿಂಹ ಗಾಣಿಗ,ಕೇಶವ ಆಚಾರ್, ಸಂತೋಷ್ ಸಾಲಿಯಾನ್, ಕಾರು ಚಾಲಕ ಸಂಘದ ಹಿರಿಯರಾದ ಶಿವರಾಮ್ ಗಾಣಿಗ, ಕೋಟ ಶನೀಶ್ವರ ದೇಗುಲದ ಸಂತೋಷ್ ಕೋಟ, ಕೋಟ ಅಮೃತೇಶ್ವರಿ ದೇಗುಲದ ಅರ್ಚಕರಾದ ಸುಧಾಕರ್ ಜೋಗಿ, ಸಿಬ್ಬಂದಿ ಬಾಬಣ್ಣ ಮತ್ತಿತರರು ಉಪಸ್ಥಿತರಿದ್ದರು.

  • ಕುಂದಾಪುರ: ಮೊಳಹಳ್ಳಿ ಟ್ರಸ್ಟ್ ನಿಂದ ಪರೀಕ್ಷೆ ತಯಾರಿ ಕಾರ್ಯಾಗಾರ

    ಕುಂದಾಪುರ: ಮೊಳಹಳ್ಳಿ ಟ್ರಸ್ಟ್ ನಿಂದ ಪರೀಕ್ಷೆ ತಯಾರಿ ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ ( ರಿ.) ಇವರ ಆಶ್ರಯದಲ್ಲಿ ಸಾಯ್ಬರಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಹಾಗೂ ಪರೀಕ್ಷೆಯ ಪೂರ್ವ ತಯಾರಿ ಕಾರ್ಯಾಗಾರ ಜರುಗಿತು.

    ಕಾರ್ಯಾಗಾರದಲ್ಲಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗಿರುವ ಒತ್ತಡ ಮತ್ತು ನಿರ್ವಹಣೆ, ಭವಿಷ್ಯದ ಸವಾಲುಗಳು, ಪರೀಕ್ಷೆಗೆ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎನ್ನುವ ಬಗ್ಗೆ 5, 6 ಮತ್ತು 7ನೆ ತರಗತಿಯ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಗಿರೀಶ್ ಎಂ ಎನ್ ಇವರು ಭಾಗವಹಿಸಿದರು.

    ಮುಖ್ಯೋಪಾಧ್ಯಾಯಿನಿ ಜಯಂತಿ ಸ್ವಾಗತಿಸಿ ಸಹ ಶಿಕ್ಷಕ ರಾಮಚುಂದ್ರ ವಾಕೂಡ ವಂದಿಸಿದರು. ಸಹ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಕುಂದಾಪುರ :ವಿಶ್ವಕರ್ಮರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ – ಶಿಲ್ಪಿ ಅರುಣ್ ಯೋಗಿರಾಜ್

    ಕುಂದಾಪುರ :ವಿಶ್ವಕರ್ಮರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ – ಶಿಲ್ಪಿ ಅರುಣ್ ಯೋಗಿರಾಜ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಜಗತ್ತು ಸೃಷ್ಟಿಯಾಗಿರುವುದೇ ವಿಶ್ವಕರ್ಮರಿಂದ. ಅಂತಹಾ ವಿಶ್ವಕರ್ಮರಿಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಅಂತಹಾ ಸಮಾಜದಲ್ಲಿ ಹುಟ್ಟಿದ ವಿಶ್ವಕರ್ಮರ ಜೀವನ ಸಾರ್ಥಕ್ಯವನ್ನು ಕಂಡುಕೊಳ್ಳಬೇಕಾದರೆ ನಾವು ನಮ್ಮ ಕಾಯಕವನ್ನು ನಿಯತ್ತಿನಲ್ಲಿ ಮಾಡಬೇಕಾಗಿದೆ ಎಂದು ಅಯೋಧ್ಯೆ ಶ್ರೀ ರಾಮ ಪ್ರಭುವಿನ ಪ್ರತಿಮೆ ಕೆತ್ತಿದ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಹೇಳಿದರು.

    ಅವರು ಕುಂದಾಪುರ ತಾಲೂಕಿನ ಕುಂಭಾಸಿ ಯಲ್ಲಿರುವ ರಥಶಿಲ್ಪಿ ರಾಜ್ ಗೋಪಾಲ ಆಚಾರ್ಯರ ವಿಶ್ವಕರ್ಮ ಕರಕುಶಲ ಶಿಲ್ಪಾಕಲಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಸಮಯಾವಕಾಶದೊಳಗೆ ಅಚ್ಚುಕಟ್ಟಾಗಿ ನಿರ್ವಹಿಸಿದಾಗ ನಮ್ಮ ಸಮಾಜದ ಗೌರವ ಹೆಚ್ಚಾಗುತ್ತದೆ ಎಂದರು.

    ಎಲ್ಲಾ ಕಲೆಗಳ ಹಾಗೇ ಶಿಲ್ಪಕಲೆಗೂ ಮಹತ್ತರವಾದ ಗೌರವವಿವದೆ. ಶಾಸ್ತ್ರೋಕ್ಷತ ಶ್ರೀ ರಾಮನ ಮೂರ್ತಿಯನ್ನು ಕೆತ್ತಿ ಅಯೋಧ್ಯ ಪ್ರಭು ಶ್ರೀರಾಮನ ಮೂರ್ತಿ ಇಡೀ ವಿಶ್ವಕರ್ಮ ಸಮಾಜಕ್ಕೆ ಹೆಮ್ಮೆ ತಂದಿದೆ. ಶಿಲ್ಪಿ ಅರುಣ್ ಯೋಗಿ ರಾಜ್ ತಮ್ಮ ಪ್ರತಿಭೆಯ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಬಾರಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ವಡೇರಹೋಬಳಿ ಹೇಳಿದರು.

    ಈ ಸಂದರ್ಭದಲ್ಲಿ ವಿಶ್ವಕರ್ಮ ಶಿಲ್ಪಕಲಾ ಕೇಂದ್ರದ ರಥ ಶಿಲ್ಪಿ ಲಕ್ಷ್ಮಿ ನಾರಾಯಣ ಆಚಾರ್ಯ ಕೋಟೇಶ್ವರ ಅವರು ಗುರುತಿಸಿ ಸನ್ಮಾನಿಸಿದರು. ರಥ ಶಿಲ್ಪಿ ಶಂಕರ ಆಚಾರ್ಯ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಆಚಾರ್ಯ ಶ್ರೀಧರ ದಾಸ್, ಪುರೋಹಿತ ರೋಹಿತಾಕ್ಷ ಆಚಾರ್ಯ, ಎಂ.ಪ್ರಭಾಕರ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೊಡು , ಉದ್ಯಮಿ ಸುರೇಶ್ ಬೆಟ್ಟಿನ್, ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ರಾಘವೇಂದ್ರ ಆಚಾರ್ಯ ಸಾಹೇಬರಕಟ್ಟೆ ವಿಶ್ವನಾಥ ಆಚಾರ್ಯ, ಗಣೇಶ್ ಭಟ್ ಗೋಪಾಡಿ, ಗಣಪತಿ ಆಚಾರ್ಯ, ಪುಷ್ಪಲತಾ ಆರ್. ಆಚಾರ್ಯ ಅಂಬಿಕಾ ಆರ್. ಆಚಾರ್ಯ, ಪತ್ರಕರ್ತ ವಸಂತ್ ಗಿಳಿಯಾರು, ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ. ಎಸ್. ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ನಿರೂಪಿಸಿ, ವಂದಿಸಿದರು

  • ಕುಂದಾಪುರ :ಹಳನಾಡು ಚತುಃಪವಿತ್ರ ನಾಗಮಂಡಲೊತ್ಸವದ ಧಾರ್ಮಿಕ ಸಭೆ

    ಕುಂದಾಪುರ :ಹಳನಾಡು ಚತುಃಪವಿತ್ರ ನಾಗಮಂಡಲೊತ್ಸವದ ಧಾರ್ಮಿಕ ಸಭೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಧಾರ್ಮಿಕವಾಗಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಭಯವೇ ಭಕ್ತಿಯ ಮೂಲ. ನಾಗ ಭಕ್ತಿಯ ಸಂಕೇತವೂ ಹೌದು, ಭಯದ ಸಂಕೇತವೂ ಹೌದು. ನಾಗಾರಾಧನೆಯನ್ನು ವಿಜ್ಞಾನದ ದೃಷ್ಟಿಯಲ್ಲಿ ನೋಡುವುದು ಬಹಳ ಅಪಾಯಕಾರಿ ಎಂದು ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾದ ಪ್ರತಾಪ್ ಚಂದ್ರ ಶೆಟ್ಟಿ ಹಳನಾಡು ಹೇಳಿದರು.

    ಕುಂದಾಪುರ ತಾಲೂಕು ಹಳನಾಡು ಗ್ರಾಮದ ಸಮಸ್ತ ದೇವರಮನೆ ಕುಟುಂಬಸ್ಥರ ಸೇವೆಯಾಗಿ ಅರ್ಭಕಧಾರಕ, ಸಹಿತ ಸಹ ಪರಿವಾರ ಶ್ರೀ ಹೊಳ್ಳಾಡಿ ಅಮ್ಮ ದೈವಸ್ಥಾನ ಹಳನಾಡು ಇಲ್ಲಿ ನಡೆದ ಚತುಃಪವಿತ್ರ ನಾಗಮಂಡಲೊತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನ ನೀಡಿದರು.

    ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾದ ಪ್ರತಾಪಚಂದ್ರ ಹಳನಾಡು ಧಾರ್ಮಿಕ ಪ್ರವಚನ ನೀಡಿ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ, ನಾಗ ಪ್ರಕೃತಿಯ ದೇವರು. ನಾಗಾರಾಧನೆಯಿಂದ ಸಂತತಿ, ಸಂಪತ್ತು, ಆರೋಗ್ಯ ಲಭಿಸುತ್ತದೆ. ಶ್ರದ್ದಾಭಕ್ತಿಯಿಂದ ನಾಗ ಆರಾಧಿಸಿದರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ನಾಗಾರಾಧನೆಗೆ ವ್ಯಯಿಸಿದ ಸಂಪತ್ತು ವರ್ಷದೊಳಗೆ ಎರಡರಷ್ಟು ವೃದ್ಧಿಯಾಗುತ್ತದೆ ಎಂದರು.

    ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ಪರಿಸರಸಹ್ಯವಾದ ಜೀವನ ಕ್ರಮ ನಮ್ಮದಾಗಬೇಕು. ನಾಗಾರಾಧನೆಯಲ್ಲಿಯೂ ಕೂಡಾ ಪರಿಸರದ ಮಹತ್ವಿಕೆಯಿದೆ. ಪರಿಸರವನ್ನು ರಕ್ಷಿಸುವ ಶ್ರದ್ದೆಯನ್ನು ಬೆಳೆಸಿಕೊಳ್ಳಬೇಕು. ಕೃಷಿಯನ್ನು ಉಳಿಸಿಕೊಂಡು, ಜಾನುವಾರುಗಳನ್ನು ಸಲಹಿಕೊಂಡು ಬದುಕು ನಡೆಸುವಂತಾಗಬೇಕು ಎಂದರು.
    ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ ಮಾತನಾಡಿ, ಉತ್ಸವ ಬೇರೆ ಜಾತ್ರೆ ಬೇರೆ.ದೇವರಿಗೆ ನಡೆಯುವುದು ಉತ್ಸವ. ಮಂಡಲೋತ್ಸವ ದೇವರಿಗೆ ಮಾತ್ರ ನಡೆಯುವುದು.

    ನಾಗಮಂಡಲೋತ್ಸವದಂತಹ ಶ್ರೇಷ್ಠ ಆರಾಧನೆಯಲ್ಲಿ ಶ್ರದ್ದೆ ಭಕ್ತಿಯಿಂದ ಪಾಲ್ಗೊಳ್ಳುವುದರಿಂದಲೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

    ಮುಖ್ಯ ಅತಿಥಿಗಳಾಗಿ ಹಳನಾಡು ದೊಡ್ಮನೆಯ ಎಚ್.ಬೋಜರಾಜ್ ಶೆಟ್ಟಿ, ಮೊಕ್ತೇಸರರಾದ ಎಚ್.ಸದಾಶಿವ ಶೆಟ್ಟಿ, ಎಚ್.ಕೆ ದೇವಾನಂದ ಶೆಟ್ಟಿ ಹಳನಾಡು, ಹೋಟೆಲ್ ಉದ್ಯಮಿ ಹರೀಶ್ ಕುಮಾರ್ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ಪ್ರಕಾಶ್ ಶೆಟ್ಟಿ ಹಳ್ನಾಡು, ಹರಿ ಓಂ ರತ್ನಾಕರ ಶೆಟ್ಟಿ, ಮಹಾಬಲ ಶೆಟ್ಟಿ ದೇವರುಮನೆ, ಕೈಗಾರಿಕಾ ನಿಗಮದ ಬೇಳೂರು ರಾಘವೇಂದ್ರ ಶೆಟ್ಟಿ, ಭಜನಾ ಪರಿಷತ್ ಅಧ್ಯಕ್ಷ ಬಿ.ರಾಜೇಂದ್ರ ಕುಮಾರ್ ಬಸ್ರೂರು ಭಾಗವಹಿಸಿದ್ದರು.

    ಜಿ.ಪಂ.ಮಾಜಿ ಸದಸ್ಯ ಎಚ್.ದೇವಾನಂದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಎಚ್.ದಯಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.ನಿವೃತ್ತ ಅಧ್ಯಾಪಕ ವಿಶ್ವನಾಥ ಶೆಟ್ಟಿ ವಂದಿಸಿದರು.

    ಮಧ್ಯಾಹ್ನ 11.45ರಿಂದ 1-15ರ ತನಕ ಸುಗಮ ಸಂಗೀತ ಭಕ್ತಿ ಗಾಯನ, ಬಿ.ರಾಜೇಂದ್ರ ಕುಮಾರ್ ಬಸ್ರೂರು ಇವರಿಂದ. ಮಧ್ಯಾಹ್ನ 1.15ರಿಂದ 2.15ರ ತನಕ ಭಜನಾ ಗಾನ ಸಂಕೀರ್ತನ ದ್ವಂದ್ವ ಹಾಡುಗಾರಿಕೆ, ಮಧ್ಯಾಹ್ನ 2.15ರಿಂದ 3 ಗಂಟೆಯ ತನಕ ಭರತನಾಟ್ಯ-ನಾಟ್ಯಾಂಜಲಿ ಕಲಾ ನಿಕೇತನ ಬಸ್ರೂರು ಇಲ್ಲಿನ ವಿದ್ಯಾರ್ಥಿಗಳಿಂದ. ಮಧ್ಯಾಹ್ನ 3 ರಿಂದ 5 ಗಂಟೆಯ ತನಕ ಶ್ರೀದೇವಿ ಮಹಾತ್ಮೆ ಹರಿಕಥಾ ಸತ್ಸಂಗ -ಡಾ.ಎಸ್.ಪಿ ಗುರುದಾಸ್ ಮಂಗಳೂರು ಹಾಗು ಬಳಗದವರಿಂದ ಪ್ರಸ್ತುತಗೊಂಡಿತು.

    ಮಾ.3ರಂದು ಆದಿತ್ಯವಾರ ಬೆಳಿಗ್ಗೆ 6.30ರಿಂದಲೇ ನಾಗಮಂಡಲೋತ್ಸವದ ಧಾರ್ಮಿಕ ಕರ್ಮಾಂಗಗಳು ಪ್ರಾರಂಭಗೊಂಡು ಸಂದರ್ಶನ, ಪಲ್ಲಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 12ರಿಂದ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 6.45ಕ್ಕೆ ರಂಗ ಪೂಜೆ ಅಷ್ಟಾವಧಾನ ಸೇವೆ, ಸಂಜೆ 7.30ಕ್ಕೆ ಹಾಲಿಟ್ಟು ಸೇವೆ, ರಾತ್ರಿ 8.30ಕ್ಕೆ ಮಂಡಲ ಪೂಜಾ, ರಾತ್ರಿ 9ರಿಂದ ಚತುಃಪವಿತ್ರ ನಾಗಮಂಡಲ ಸೇವೆ ನಂತರ ಪ್ರಸಾದ ವಿತರಣೆ, ಮಂತ್ರಾಕ್ಷತೆಯೊಂದಿಗೆ ಸಂಪನ್ನಗೊಂಡಿತು.

  • ಕುಂದಾಪುರ :ಓದುಗರಲ್ಲಿ ಕುತೂಹಲ ಉಂಟು ಮಾಡುವ ಕೌಶಲ್ಯ ಕಥೆಗಾರರಲ್ಲಿ ಇರಬೇಕು – ರವಿಕಿರಣ್ ಮುರ್ಡೇಶ್ವರ

    ಕುಂದಾಪುರ :ಓದುಗರಲ್ಲಿ ಕುತೂಹಲ ಉಂಟು ಮಾಡುವ ಕೌಶಲ್ಯ ಕಥೆಗಾರರಲ್ಲಿ ಇರಬೇಕು – ರವಿಕಿರಣ್ ಮುರ್ಡೇಶ್ವರ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಕಥೆಗಾರರಲ್ಲಿ ಅದ್ಭುತವಾದ ಆಲೋಚನಾ ಶಕ್ತಿ ಇರಬೇಕು. ಓದುಗರ ನಿರೀಕ್ಷೆಯನ್ನೂ ಮೀರಿ ಕಥೆಯ ಮುಕ್ತಾಯವಾಗಬೇಕು. ಕಥೆಯನ್ನು ನಿರೂಪಿಸುತ್ತಾ ಹೋಗುವಾಗ ಜಾಗರೂಕವಾಗಿರಬೇಕು. ಭಾಷೆ, ವ್ಯಾಕರಣದ ಬಗ್ಗೆ ಪ್ರಭುತ್ವ ಇರಬೇಕು. ಕಥೆಯಲ್ಲಿ ಬರುವ ಪಾತ್ರಗಳು, ಅದನ್ನು ಬೆಳೆಸುವಲ್ಲಿ ಕಥೆಗಾರ ಓದುಗರಲ್ಲಿ ಕುತೂಹಲ ಉಂಟು ಮಾಡುವ ಕೌಶಲ್ಯ ಕಥೆಯಲ್ಲಿ ಇರಬೇಕು ಎಂದು ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ  ಹೇಳಿದರು.
    ಮಾ.೩ರಂದು ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಮತ್ತು ವೀರಲೋಕ ಪ್ರಕಾಶನ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ರೋಟರಿ ಕುಂದಾಪುರ ಮಿಡ್‌ಟೌನ್ ಸಭಾಂಗಣದಲ್ಲಿ ನಡೆದ ಎರಡು ದಿನಗಳ ದೇಸಿ ಜಗಲಿ ಕಥಾ ಕಮ್ಮಟದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
    ಕಥೆಯನ್ನು ಅದ್ಬುತವಾಗಿ ಓದುಗರ ಮುಂದಿಡುವಲ್ಲಿ ಕಥೆಗಾರರ ಕೌಶಲ್ಯವೂ ಮುಖ್ಯ. ಓದುಗರ ಆಲೋಚನೆಗೆ ಚುರುಕು ಮುಟ್ಟಿಸುವ, ಚಿಂತನೆಗಳನ್ನು ಹುಟ್ಟು ಹಾಕುವ ಕಥೆಗಳು ಖುಷಿಯ ಜೊತೆ ಮನಸ್ಸಿನಲ್ಲಿ ಪರಾಮರ್ಶೆಗೂ ಅವಕಾಶ ನೀಡುತ್ತದೆ. ಕುತೂಹಲ ಕೆರಳಿಸುವ ಪತ್ತೆದಾರಿ ಕಥೆಗಳ ಅವಶ್ಯಕತೆ ಕನ್ನಡದಲ್ಲಿ ಇದೆ ಎಂದರು.
    ಸಮಾರೋಪ ಭಾಷಣ ಮಾಡಿದ ಪಂಚಾಯತ್ ರಾಜ್ ಪರಿಣಿತ ಎಸ್.ಜನಾರ್ದನ್ ಮರವಂತೆ  ಕನ್ನಡದಲ್ಲಿ ಸಾಕಷ್ಟು ಅತ್ಯುತ್ತಮ ಕಥೆಗಳಿವೆ. ಕಥೆಗಾರರು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ಉತ್ತಮ ಕಥೆಗಳನ್ನು ನೀಡಲು ಸಾಧ್ಯ. ಕಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುವಲ್ಲಿ ಓದು ಸಹಕಾರಿಯಾಗುತ್ತದೆ. ಓದುವಿಕೆ ಇಲ್ಲದಿದ್ದರೆ ಉತ್ತಮ ಕಥೆಗಾರರಾಗಲು ಸಾಧ್ಯವಿಲ್ಲ, ಭಾಷೆಯ ಮೇಲೆ ಹಿಡಿತ ಸಾಧಿಸಲು ಓದುವಿಕೆ ಮುಖ್ಯ ಎಂದು ಹೇಳಿದರು.
    ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಖ್ಯಾತ ವ್ಯಂಗ್ಯಚಿತ್ರಕರಾದ ಕೆ.ಜಿ ಹೆಬ್ಬಾರ್, ಕಥೆಗೊಂದು ಚಿತ್ರವಿದ್ದರೆ ಅದು ಇನ್ನಷ್ಟು ಪರಿಣಾಮಕಾರಿಯಾಗಿ ನಿಲ್ಲುತ್ತದೆ. ಕಥೆ ಅಥವಾ ಚಿತ್ರ ರಚನೆಕಾರರಿಂದ ಹೊರಬಂದ ಮೇಲೆ ಅದು ಓದುಗರ ಸ್ವತ್ತು. ಕಥೆಯ ವಸ್ತುವನ್ನು ಆಧರಿಸಿ ಚಿತ್ರವನ್ನು ಕಥೆಯ ಮುಖ್ಯವಾಹಿನಿ ಹತ್ತಿರಕ್ಕೆ ಹೋಗುವ ಪ್ರಯತ್ನ ಮಾಡುತ್ತೇವೆ. ಇವತ್ತು ಸಾಹಿತ್ಯ ಕ್ಷೇತ್ರಕ್ಕೆ ಹೊಸ ಚಿಗುರು ಕಾಣಿಸುತ್ತಿದೆ. ಈ ಆಸಕ್ತಿ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು. ಬಹುಶಃ ಈಗ ಸಿಗುವಂತಹ ಅವಕಾಶಗಳು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಗುವ ವಿಫುಲ ವೇದಿಕೆಗಳು ಹೊಸ ಹೊಸ ಬರಹಗಾರರಿಗೆ ಅನುಕೂಲಕಾರಿಯಾಗಿವೆ. ಇಂಥಹ ಕಥಾಕಮ್ಮಟಗಳ ಸದುಪಯೋಗ ಪಡೆದುಕೊಂಡು ಯಶಸ್ವಿಯಾದ ಕಥೆಗಾರರು ಮುಂದೆ ದೊಡ್ಡ ಕಥೆಗಾರರಾಗಿ ಮಾರ್ಪಟ್ಟಾಗ ತಮಗೆ ಮಾರ್ಗದರ್ಶನ ಮಾಡಿದ ಸಂಸ್ಥೆಗಳ ಮರೆಯಬಾರದು ಎಂದರು.

    ಹಿರಿಯ ಲೇಖಕಿ, ಅನುವಾದಕಿ ಡಾ.ಪಾರ್ವತಿ ಜಿ.ಐತಾಳ್ ಉಪಸ್ಥಿತರಿದ್ದರು.
    ಈ ಸಂದರ್ಭದಲ್ಲಿ ಹಿರಿಯ ಲೇಖಕಿ ಡಾ.ಪಾರ್ವತಿ ಜಿ ಐತಾಳ್ ಅವರ ಕನ್ನಡದ ಮೂಲಕ ಇಂಗ್ಲೀಷ್ ಕಲಿಯಿರಿ ಪುಸ್ತಕವನ್ನು ಎಸ್.ಜನಾರ್ದನ್ ಮರವಂತೆ ಬಿಡುಗಡೆಗೊಳಿಸಿದರು.
    ಜನಪ್ರತಿನಿಧಿ ಪ್ರಕಾಶನದ ಮುಖ್ಯಸ್ಥರಾದ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
    ಶಿಬಿರಾರ್ಥಿಗಳಾದ ಶರತ್ ವಂಡ್ಸೆ,  ವರುಣ್, ಸುಮನಾ ಆರ್ ಹೇರ್ಳೆ ಅನಿಸಿಕೆ ಹಂಚಿಕೊಂಡರು. ನಾಗರಾಜ್ ವಂಡ್ಸೆ, ಸುರಕ್ಷಾ ಉಡುಪ, ಕೀರ್ತನ್ ಪಡುಕೋಣೆ ಅತಿಥಿಗಳ ಪರಿಚಯಿಸಿದರು. ವಿನಯ ಕೌಂಜೂರು ಕಾರ್ಯಕ್ರಮ ನಿರ್ವಹಿಸಿದರು. ಸುಮನಾ ಪಡುಕೋಣೆ ವಂದಿಸಿದರು. ಶ್ರೀರಾಜ್ ವಕ್ವಾಡಿ ಕಾರ್ಯಕ್ರಮದ ರೂಪುರೇಷೆ ಸಂಯೋಜಿಸಿದ್ದರು. ಕೃಷ್ಣ, ರೂಪೇಶ್, ರಕ್ಷಿತ್ ಕೋಟೇಶ್ವರ, ಗಣೇಶ ಬಳ್ಕೂರು, ಮಧುಸೂದನ್ ಕಾರ್ಯಕ್ರಮಕ್ಕೆ ಸಹಕರಿಸಿದರು. ಎರಡು ದಿನಗಳ ಕಾಲ ನಡೆದ ಕಥಾ ಕಮ್ಮಟದಲ್ಲಿ ೪೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.