ಕಾಂಗ್ರೆಸ್‌ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ :ಕುಂದಾಪುರ – ದಿನೇಶ್ ಹೆಗ್ಡೆ ಮೊಳಹಳ್ಳಿ, ಬೈಂದೂರು-ಗೋಪಾಲ ಫೂಜಾರಿ, ಕಾಪು-ವಿನಯ್ ಕುಮಾರ್ ಸೊರಕೆ

ಕುಂದಾಪುರ ಮಿರರ್ ಸುದ್ದಿ…

ಬೆಂಗಳೂರು – ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್‌ ಮಾಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತವಾಗಿದೆ. ಟಿ.ನರಸೀಪುರದಿಂದ ಹೆಚ್.ಸಿ.ಮಹದೇವಪ್ಪಗೆ ಟಿಕೆಟ್‌ ನೀಡಲಾಗಿದೆ. ನಂಜನಗೂಡಿನಿಂದ ಧ್ರುವ ನಾರಾಯಣ್‌ ಪುತ್ರ ದರ್ಶನ್‌, ನಾಗಮಂಗಲದಿಂದ ಚಲುವನಾರಾಯಣಸ್ವಾಮಿ, ದೇವನಹಳ್ಳಿಯಿಂದ ಮುನಿಯಪ್ಪ,‌ ಕನಕಪುರದಿಂದ ಡಿ.ಕೆ.ಶಿವಕುಮಾರ್, ಬೀದರ್‌ ದಕ್ಷಿಣ ಕ್ಷೇತ್ರದಿಂದ ಅಶೋಕ್‌ ಖೇಣಿಗೆ ಟಿಕೆಟ್‌ ನೀಡಲಾಗಿದೆ.

ಕರಾವಳಿ ಭಾಗದಲ್ಲಿ ಮಂಗಳೂರು – ಯು.ಟಿ ಖಾದರ್, ಮೂಡುಬಿದಿರೆ -ಮಿಥುನ್ ರೈ, ಬೆಳ್ತಂಗಡಿ – ರಕ್ಷಿತ್ ಶಿವರಾಂ, ಬಂಟ್ವಾಳ ರಾಮನಾಥ ರೈ , ಸುಳ್ಯ – ಕೃಷ್ಣಪ್ಪ ಜಿ, ಬೈಂದೂರು-ಗೋಪಾಲ ಫೂಜಾರಿ, ಕಾಪು-ವಿನಯ್ ಕುಮಾರ್ ಸೊರಕೆ, ಕುಂದಾಪುರ-ದಿನೇಶ್ ಹೆಗ್ಡೆ ಮೊಳಹಳ್ಳಿ ಟಿಕೆಟ್ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *

More posts