ಕೋಟ :ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಸ್ಥಾನಿಯ ಸಮಿತಿಯ ಸಭೆ, ಆಯ್ಕೆ

0
349

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಪಾಂಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಸ್ಥಾನಿಯ ಸಮಿತಿಯ ಸಭೆಯು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಕುಂದರ್ ನೇತೃತ್ವದಲ್ಲಿ ನಡೆಯಿತು.

ಸಭೆಯಲ್ಲಿ ಪಾಂಡೇಶ್ವರ ಗ್ರಾಮದ ಸ್ಥಾನಿಯ ಸಮಿತಿಯ ಅಧ್ಯಕ್ಷರಾಗಿ ಅವಿನಾಶ್ ಪೂಜಾರಿ ಎಡಬೆಟ್ಟು ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Click Here

ಉಪಾಧ್ಯಕ್ಷರಾಗಿ ಪಿ.ವಿಠ್ಠಲ ಪೂಜಾರಿ ಮತ್ತು ಸುಪ್ರೀತಾ ಪಾಂಡೇಶ್ವರ, ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿ ಪೂಜಾರಿ , ಜೊತೆ ಕಾರ್ಯದರ್ಶಿಯಾಗಿ ಪಿ ಎಸ್ ಶ್ರೀಧರ್ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ರಾಜಶೇಖರ್ ಪೂಜಾರಿ ಪಾಂಡೇಶ್ವರ, ಮತ್ತು ಪ್ರವೀಣ್ ಪೂಜಾರಿ , ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಸ್ಥಾನಿಯ ಸಮಿತಿ ಅಧ್ಯಕ್ಷ ರಮೇಶ್ ಆಚಾರ್ಯ , ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷೆ ರೋಷನಿ ಒಲಿವೇರಾ , ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಲ್ಪನಾ ದಿನಕರ್ , ಉಪಾಧ್ಯಕ್ಷರಾದ ಸಿಲ್ವೇಸ್ಟಾರ್ ಡಿಸೋಜ , ಪಂಚಾಯತ್ ಮಾಜಿ ಅಧ್ಯಕ್ಷೆ ಸುಶೀಲ ಪೂಜಾರಿ, ಹಾಗೂ ಲೀಲಾವತಿ ಗಂಗಾಧರ್ ಪೂಜಾರಿ, ಸ್ಥಳೀಯ ಮುಖಂಡರಾದ ಅನಿಲ್ ಹಾಂಡ, ನಿರ್ಮಲ,ನಂದಿನಿ, ಸುಪ್ರೀತಾ, ದಿನಕರ ಪೂಜಾರಿ, ಪಿ.ಬಿ ಶ್ರೀಕಾಂತ್ ಆಚಾರ್ಯ,ದೇವರಾಜ್ ಆಚಾರ್ಯ ಉಪಸ್ಥಿತರಿದ್ದರು. ವೈ ಬಿ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Click Here

LEAVE A REPLY

Please enter your comment!
Please enter your name here