ಉಡುಪಿ :ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ : ಕೋಟಾ

0
478

ಕುಂದಾಪುರ ಮಿರರ್ ಸುದ್ದಿ…

ಉಡುಪಿ ; ನನ್ನ ಇಡೀ ರಾಜಕೀಯ ಜೀವನದಲ್ಲಿ ನಾನು ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ ಎಂದು ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಾಮಪತ್ರ ಸಲ್ಲಿಕೆಗ ಮುನ್ನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಒಳ್ಳೆಯ ಮುಹೂರ್ತದಲ್ಲಿ ನಾಮಪತ್ರ ಹಾಕ್ತೇನೆ ಎಂದ ಅವರು ಹಿರಿಯರು ಗ್ರಾಮಪಂಚಾಯತ್ ಸದಸ್ಯನಿಂದ ನಿಂದ ಆರಂಭವಾಗಿ ಮಂತ್ರಿಯಾದೆ. ಜಿಲ್ಲಾಧ್ಯಕ್ಷನಿಂದ ಒಬಿಸಿ ಮೋರ್ಚಾದವರೆಗೆ ಸಂಘಟನೆ ಮಾಡಿದ್ದೇನೆ. ಮುಜರಾಯಿ ಮಂತ್ರಿಯಾಗಿ ಸಾವಿರಾರು ದೈವಸ್ಥಾನ ದೇವಸ್ಥಾನದಿಂದ ಹಣ ಮಂಜೂರು ಮಾಡಿದೆ. ಒಂದೇ ದಿನ 26 ಸಾವಿರ ಬಡ ಮಕ್ಕಳು ಹಾಸ್ಟೆಲ್ ವ್ಯವಸ್ಥೆಗೆ ಒಳಪಡಿಸಿದೆ. ಮೂರು ಸೇನಾ ತರಬೇತಿ ಶಾಲೆ ದೇಶದಲ್ಲೇ ದಾಖಲೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸಾಮಾನ್ಯ ಚುನಾವಣೆ ಅಲ್ಲ ಇದು ಭಾರತದ ಭವಿಷ್ಯದ ಚುನಾವಣೆ. ಅಂದು ಚಿನ್ನ ಅಡವಿಟ್ಟ ಭಾರತ ಇವತ್ತು ಮೋದಿ ಆಡಳಿತದಲ್ಲಿ ಹತ್ತಾರು ದೇಶಕ್ಕೆ ಸಾಲಕೊಟ್ಟ ಭಾರತವಾಗಿದೆ ಎಮದ ಕೋಟಾ, ಸೈನಿಕರಿಗೆ ಶಕ್ತಿಕೊಟ್ಟದ್ದು ಮೋದಿಯ ಆಡಳಿತ ಎಂದರು.

ಸಿ.ಟಿ ರವಿ ಮಾತನಾಡಿ, ಹಗರಣಗಳ ಪಕ್ಷ ಕಾಂಗ್ರೆಸ್. ನಮ್ಮದು ನೀತಿ -ನೇತೃತ್ವ ನಿಯತ್ತಿನ ಚುನಾವಣೆ. ಮೋದಿ ಕಾಲದಲ್ಲಿ 7 ರಿಂದ 20 ಲಕ್ಷ ಕೋಟಿವರೆಗೆ ತೆರಿಗೆ ಹಣ ಸಂಗ್ರಹವಾಗಿದೆ. ಕಾಂಗ್ರೆಸ್ 14 ಟಿಕೆಟ್ ಕಾಂಗ್ರೆಸ್ ಕುಟುಂಬಕ್ಕೆ ಕೊಟ್ಟಿದೆ. ಕಾಂಗ್ರೆಸ್ ನಲ್ಲಿ ಕಾರ್ಯಕರ್ತರು ಪಕ್ಷದ ಚಾಕರಿ ಮಾಡಲು ಮಾತ್ರ ಇರೋದು. ಕಾಂಗ್ರೆಸ್ ನದ್ದು ಪಪ್ಪು ನೇತೃತ್ವ, ಬಿಜೆಪಿದ್ದು ಜಗತ್ತು ಕೊಂಡಾಡಿದ ನೇತೃತ್ವ ಎಂದು ಮೋದಿಯನ್ನು ಕೊಂಡಾಡಿದರು. ಭಾರತ ಅಮೃತಕಾಲದಲ್ಲಿ ವಿಶ್ವಗುರು ಭಾರತ ಆಗಬೇಕು ಎಂಬುದು ಗುರಿ ಭ್ರಷ್ಟಾಚಾರ ಮುಚ್ಚಿ ಹಾಕಲು, ಜಾತಿಗಾಗಿ, ದೇಶ ಒಡೆಯಲು ಅಧಿಕಾರ ಕೊಡಬೇಡಿ. ಭಯೋತ್ಪಾಧಕರಿಗೆ ಗಲಭೆಕೋರರಿಗೆ ಕಾಂಗ್ರೆಸ್ ಬ್ರದರ್ಸ್ ಅಂತಾರೆ ಬಾಂಬ್ ತಯಾರಿ ಲಿಂಕ್ ಚಿಕ್ಕಮಗಳೂರು, ದ.ಕ ಉಡುಪಿ ಉತ್ತರ ಕನ್ನಡ ಜೊತೆ ಲಿಂಕ್ ಇದೆ ಅದನ್ನು ಮಟ್ಟ ಹಾಕ್ತೇವೆ. ಮತ್ತೆ ಬಾಬ್ರಿ ಮಸೀದಿ ನಿರ್ಮಾಣದ ಕೂಗು ಕೇಳುತ್ತಿದೆ.. ಅವಕಾಶ ಕೊಡ್ತೀರಾ? ಎಂದು ಪ್ರಶ್ನಿಸಿದ ಅವರು, ಮಥುರಾ, ಕಾಶಿ ಪುನರ್ ನಿರ್ಮಾಣ ಮಾಡುವ ತಾಕತ್ತು ಮೋದಿ ಸರಕಾರಕ್ಕಿದೆ. ಕೋಟ ಗೆಲುವಿನೊಂದಿಗೆ ಮೋದಿ ಸರ್ಕಾರದ ನಡೆಯುತ್ತದೆ ಎಂದರು. ಕೋಟ ಕಮಿಟೆಡ್ ಕೇಡರ್. ಹೀ ಈಸ್ ನಾಟ್ ಜಂಪಿಂಗ್ ಸ್ಟಾರ್. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಎಂದರು.

Click Here

Click Here

ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಾನು ಕರಾವಳಿ ಹಿಂದುತ್ವ ನೋಡಲು ಬಂದಿದ್ದೇನೆ. ಉತ್ತರ ಕರ್ನಾಟಕದಲ್ಲಿ ಈಗ ಹಿಂದುತ್ವ ಉಗಮ ಆಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಚೌಟಾ ಮತ್ತು ಉಡುಪಿ ಚಿಕ್ಕಮಗಳೂರಿನಲ್ಲಿ ಕೋಟಾ ಸೇರಿ ಕಾಂಗ್ರೆಸ್ ಗೆ ಗೂಟ ಇಡಲಿದ್ದಾರೆ. ಇದು ಮೋದಿ ಚುನಾವಣೆ ಅಲ್ಲ ಸನಾತನ ಧರ್ಮ ಉಳಿಸುವ ಚುನಾವಣೆ ಎಂದರು. ಸಿದ್ದರಾಮಯ್ಯ ದಾಟಿಯನ್ನು ಅಣಕಿಸಿದ ಯತ್ನಾಳ್, ತಿಹಾರ್ ಜೈಲಿಂದ ಬಂದವ 15 ಲಕ್ಷ ಕೇಳ್ತಾನೆ.. ನಿನ್ನ ಆಸ್ತಿ ಮಾರಿದ್ರೆ ಕೊಡಬಹುದು ಎಂದು ಡಿಕೆಶಿಗೆ ಟಾಂಗ್ ಕೊಟ್ಟರು. ಯಾರನ್ನು ಬಿಡಲ್ಲ, ನಿಮ್ಮನ್ನೂ ಬಿಡಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದರು. ಈ ಹತ್ತು ವರ್ಷ ಜಸ್ಟ್ ಟ್ರೈಲರ್ ಅಷ್ಟೇ. ಮುಂದಿನ ಪಿಚ್ಚರ್ ಬಾಕಿ ಇದೆ ಎಂದ ಅವರು, ಕೇಜ್ರಿವಾಲ್ ಇಲ್ಲ.. ಡಿಂಗ್ರಿವಾಲನೂ ಜೈಲಿಗೆ ಹೋಗ್ತಾನೆ. ಈಗ ಮಗ -ತಂಗಿ- ಅಣ್ಣನ ಮಗನಿಗೆ ಟಿಕೆಟ್ ಅಂತ ಕಚ್ಚಾಡ್ತಿದ್ದಾರೆ ಎಂದರು. ಮೋದಿ ಆಯ್ಕೆ ಆದ್ರೆ ಎಲ್ಲಾ ನಿರ್ನಾಮ ಆಗುತ್ತದೆ ಎಂದರು. ರಾಹುಲ್ ವರಿಜಿನಾಲಿಟಿ ಪ್ರಶ್ನಿಸಿದ ಯತ್ನಾಳ್, ರಾಹುಲ್ ದೇಗುಲ -ಮಸೀದಿ -ಚರ್ಚ್ ಹೋದಾಗ ಬದಲಾಗ್ತಾನೆ. ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತೀನಿ ಅಂತಾನೆ. ಸಿದ್ದುಗೆ ಮುಂದಿನ ಜನ್ಮ ಕೊಡೋಕೆ ದೇವರಿಗೆ ತಲೆ ಕೆಟ್ಟಿದ್ಯಾ? ಮುಂದಿನ ಜನ್ಮದಲ್ಲೇನು ಈಗಲೇ ಮುಸ್ಲಿಂ ಆಗಿಬಿಡು ಎಂದು ಛೇಡಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾ ಮೂರು ಜನರ ಕಂಪನಿ
ಸಿಎಂ ಗೆ ಸನ್ಮಾನ ಸಂದರ್ಭ ಸತ್ತಮೇಲೆ ಲಿಂಗಾಯತರ ಹೆಣ ಕೂರಿಸಿದಂಗೆ ಕೂರಿಸಿ ಹೂವು ಹಾಕಿದ್ರು. ಸಿದ್ದರಾಮಯ್ಯ ನಕ್ಕರೆ ರಾವಣ ನಕ್ಕಂಗಾಗುತ್ತೆ. ಸಿದ್ದರಾಮಯ್ಯ ಇಳಿದರೆ ಕಾಂಗ್ರೆಸ್ ಡುಬುಕ್ ಅಂತ ಬಿದ್ ಬಿಡುತ್ತೆ ಎಂದು ಲೇವಡಿ ಮಾಡಿದರು.

ಯಾವುದೇ ಕಾರಣಕ್ಕೂ ಮೋದಿ ಸಂವಿಧಾನ ಬದಲು ಮಾಡಲು ಬಿಡಲ್ಲ. ಅಂಬೇಡ್ಕರ್ ಸಮಾಧಿಗೆ ಕಾಂಗ್ರೆಸ್ 10 ಫೀಟ್ ಜಾಗ ಕೊಟ್ಟಿಲ್ಲ. ನೆಹರೂ, ಇಂದಿರಾ ಸಮಾಧಿ ಸ್ಥಳಕ್ಕೆ ಎಕ್ರೆಗಟ್ಟಲೆ ಮಾಡಿಕೊಂಡಿದ್ದಾರೆ ಎಂದ ಅವರು, ಮತದಾನ ದೇವರ ಧರ್ಮದ ದೇಶದ ಕೆಲಸ. ಎಲ್ಲಾ ಮತದಾರರೂ ಮತದಾನ ಮಾಡಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಯ ದೇವರಾಜ ಶೆಟ್ಟಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್, ತೀರ್ಥಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಅರಗ ಜ್ಜಾನೇಂದ್ರ, ವಿಧಾನ ಪರಿಷತ್ ಉಪ ಸಭಾಪತಿ, ಎಮ್.ಕೆ.ಪ್ರಾಣೇಶ್, ಕುಂದಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಕಿರಣ್ ಕೊಡ್ಗಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರು ವಿಭಾಗದ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಕುತ್ಯಾರ್ ನವೀನ್ ಶೆಟ್ಟಿ,
ದ.ಕ.ಜಿಲ್ಲೆಯ ಅಭ್ಯರ್ಥಿ ಬ್ರಿಜೇಶ್ ಚೌಟಾ , ರವೀಂದ್ರ ಬೆಳ್ಮಾಡಿ, ಪ್ರತಾಪ್ ಸಿಂಹ್, ವಿಧಾನ ಪರಿಷತ್ ಸದಸ್ಯ ಬೋಜೆ ಗೌಡ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಉಡುಪಿ ಜೆಡಿಎಸ್ ಜಿಲ್ಲಾಧ್ಯಕ್ಷ್ ಯೋಗೀಶ್ ಶೆಟ್ಟಿ, ರಂಜನ್ ಅಜೀತ್ ಕುಮಾರ್, ಕುಲ್ಯಾಡಿ ಸುರೇಶ್ ನಾಯಕ್, ಮಾಜಿ ಶಾಸಕ ರಘಪತಿ ಭಟ್, ಕೃಷ್ಣ್ ಪಲೆಮಾರ್, ಲಾಲಾಜಿ ಮೆಂಡನ್, ಜೀವರಾಜ್, ಶಿಲ್ಪಾ ಜಿ.ಸುವರ್ಣ, ಸುಧಾಕರ್ ಶೆಟ್ಟಿ, ಮಟ್ಟಾರು ರತ್ನಾಕರ್ ಶೆಟ್ಟಿ, ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧ್ಯಕ್ಷ್ ಬಿ.ಕಿಶೋರ್ ಕುಮಾರ್ ಸ್ವಾಗತಿಸಿದರು. ರೇಷ್ಮಾ ಉದಯ್ ಶೆಟ್ಟಿ ವಂದಿಸಿದರು.

Click Here

LEAVE A REPLY

Please enter your comment!
Please enter your name here