ತೆಕ್ಕಟ್ಟೆ :ಎಳವೆಯಿಂದಲೇ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಿ: ರವೀಂದ್ರ ಕೋಟ

0
493

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ನಿಸರ್ಗದ ಮಡಿಲಲ್ಲಿ ಪ್ರತೀ ವರ್ಷ ಶಿಬಿರವನ್ನು ಕಳೆಯುತ್ತಿದ್ದೀರಿ. ನಿಸರ್ಗ ನೆರಳನ್ನು, ಗಾಳಿಯನ್ನು ನೀಡಿ ನಿಮ್ಮನ್ನು ತಂಪಾಗಿಸಿದೆ. ಪರಿಸರದ ಬಗೆಗೆ ಕಾಳಜಿ ಉಳ್ಳವರಾಗಿ. ಎಲ್ಲೆಂದರಲ್ಲಿ ಕಸವನ್ನು ಎಸೆಯುವುದನ್ನು ತಡೆಯಿರಿ. ನಿಮ್ಮ ಭವಿಷ್ಯಕ್ಕೆ ಪರಿಸರ ಬೇಕೇ ಬೇಕು. ಎಳವೆಯಿಂದಲೇ ಪರಿಸರದ ಬಗೆಗೆ ಕಾಳಜಿ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಪತ್ರಕರ್ತ ರವೀಂದ್ರ ಕೋಟ ಶಿಬಿರವನ್ನುದ್ಧೇಶಿಸಿ ಮಾತನ್ನಾಡಿದರು.

Click Here

ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ, ಧಮನಿ ಹಾಗೂ ದಿಮ್ಸಾಲ್ ಸಂಸ್ಥೆಗಳ ಸಹಯೋಗದಲ್ಲಿ 24ನೇ ದಿನದ ‘ರಜಾರಂಗು-24’ ಶಿಬಿರವು ಮೇ 4 ರಂದು ತೆಕ್ಕಟ್ಟೆಯಲ್ಲಿ ನಡೆದ ಸಮಾರಂಭವನ್ನುದ್ದೇಶಿಸಿ ರವೀಂದ್ರ ಮಾತನ್ನಾಡಿದರು.

ರಂಗ ನಿರ್ದೇಶಕ ನಾಗೇಶ್ ಕೆದೂರು, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ಶಿಬಿರಾರ್ಥಿ ಶಶಾಂಕ್, ಉಪಸ್ಥಿತರಿದ್ದರು. ಚಿಣ್ಣರೇ ಸಭಾ ಕಾರ್ಯಕ್ರಮದ ಎಲ್ಲಾ ನಿರ್ವಹಣೆಯನ್ನು ಪೂರೈಸಿದರು.

Click Here

LEAVE A REPLY

Please enter your comment!
Please enter your name here