ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಭಾರತೀಯ ಜನತಾ ಪಕ್ಷದ ವತಿಯಿಂದ ನವದುರ್ಗೆಯರ ಮತದಾನ ಅಭಿಯಾನಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ ಗ್ರಾಮದ ಮತಗಟ್ಟೆ ಸಂಖ್ಯೆ 95ರಲ್ಲಿ ಚಾಲನೆ ದೊರಕಿತು.
ಈ ಮತಗಟ್ಟೆಯಲ್ಲಿ ನವದುರ್ಗೆಯರೆನ್ನಿಸಿಕೊಂಡ ಜಾನಕಿ, ಮಹಾಲಕ್ಸ್ಮಿ, ಪಾರ್ವತಿ, ಲಕ್ಸ್ಮಿ, ಮಾಲತಿ, ರೇವತಿ, ಸವಿತಾ, ವಿಶಾಲ, ಮಮತಾ, ಜ್ಯೋತಿ, ಗೀತಾ, ಪಾರ್ವತಿ, ಹೇಮಾ ಶಿವಮೊಗ್ಗ ಲೋಕಸಭೆಯ ಬಿಜೆಪಿ ಅಭ್ಯರ್ಥಿಗೆ ಮೊದಲ ಸರತಿಯಲ್ಲಿ ನಿಂತು ಮತದಾನ ಮಾಡಿದರು.











