ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೋಟ ಮೆಸ್ಕಾಂ ಉಪವಿಭಾಗದಲ್ಲಿ ಹಾಗೂ ವಿವಿಧ ಮೆಸ್ಕಾಂ ರೆವಿನ್ಯೂನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಗುರುವಾರ ನಿವೃತ್ತಿ ಹೊಂದಿರುವ ಕಿರಿಯ ಸಹಾಯಕಿ ಮುನಿಜಾ ಇವರನ್ನು ಸನ್ಮಾನಿಸಿ ಬಿಳ್ಕೋಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಹಾಯಕ ಇಂಜಿನಿಯರ್ ಶ್ರೀಕಾಂತ ವಹಿಸಿದ್ದರು.
ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಘವೇಂದ್ರ, ಕುಂದಾಪುರ ಸ್ಥಳೀಯ ಸಮಿತಿ ಅಧ್ಯಕ್ಷ ಅಭಿಲಾಷ್, ಪ್ರಾಥಮಿಕ ಸಮಿತಿಯ ಅಧ್ಯಕ್ಷ ದಿನೇಶ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಮಹೇಶ ಕೆ ಸಹಾಯಕ ಲೆಕ್ಕಾಧಿಕಾರಿ ಕೋಟ, ಕೋಟ ಸಹಾಯಕ ಇಂಜಿನಿಯರ್ ಪ್ರಶಾಂತ ಶೆಟ್ಟಿ, ಶಾಖಾಧಿಕಾರಿಗಳಾದ ಮಹೇಶ ಕೆ. ಸಾಸ್ತಾನ, ವೈಭವ ಶೆಟ್ಟಿ ಶಿರಿಯಾರ, ಮೇಲ್ವಚಾರಕರಾದ ಚಂದ್ರಶೇಖರ ಕೋಟ, ಉಮೇಶ ಶಿರಿಯಾರ ಹಾಗೂ ನೌಕರರು, ಗುತ್ತಿಗೆದಾರರು ಉಪಸ್ಥಿತರಿದ್ದರು.











