75 ನೇ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆ ಮತ್ತು ಸಿದ್ಧರಾಮಯ್ಯ – 75 ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಾಪಚಂದ್ರ ಶೆಟ್ಟಿ ಕರೆ

0
360

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :75 ನೇ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆಯನ್ನು ಪಕ್ಷ ನೀಡಿರುವ ಸೂಚನೆಯಂತೆ ಯಶಸ್ವಿಗೊಳಿಸಬೇಕು ಮತ್ತು ರಾಜ್ಯದ ಬಡವರಿಗೆ ,ಹಿಂದುಳಿದವರಿಗೆ ಮತ್ತು ಧೀನ ದಲಿತರಿಗೆ ಸಾಮಾಚಿಕ ನ್ಯಾಯ ಒದಗಿಸಿ ಶೋಷಿತರ ಪರ ತನ್ನ ಅಧಿಕಾರ ಅವಧಿಯಲ್ಲಿ ಕೆಲಸ ಮಾಡಿದ ಮಾಜಿ ಮುಖ್ಯಮಂತ್ರಿ,ಸಿದ್ಧರಾಮಯ್ಯ – 75 ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ.ಕೆ. ಪ್ರತಾಪಚಂದ್ರ ಶೆಟ್ಟಿ ಕರೆ ನೀಡಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಕ್ಷದ ಬೂತ್ ಸಮಿತಿ ಮತ್ತು ಗ್ರಾಮೀಣ ಸಮಿತಿಗಳನ್ನು ಮತ್ತು ಮೂಂಚೂಣಿ ಘಟಕಗಳನ್ನು ಬಲಿಷ್ಠಗೊಳಿಸಬೇಕೆಂದು ತಿಳಿಸಿದರು.

Click Here

ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ ಕುಂದರ್ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ , ಬೆಳ್ವೆ ಸತೀಶ ಕಿಣಿ, ಕೆ. ಸದಾನಂದ ಶೆಟ್ಟಿ ,ಬಿ. ಹಿರಿಯಣ್ಣ , ಬಾಲಕ್ರಷ್ಣ ಪೂಜಾರಿ,ರೋಶಿನಿ ಒಲಿವೆರಾ ,ಕ್ರಷ್ಣದೇವ ಕಾರಂತ, ದಿನೇಶ ಹೆಗ್ಡೆ ,ಇಚ್ಚಿತಾಥ೯ ಶೆಟ್ಟಿ, ವಿಕಾಸ ಹೆಗ್ಡೆ, ದೇವಕಿ ಸಣ್ಣಯ್ಯ ,ಉಪಸ್ಥಿತರಿದ್ದರು.

ಮಲ್ಯಾಡಿ ಶಿವರಾಮ ಶೆಟ್ಟಿ ಸ್ವಾಗತಿಸಿ ನಾರಾಯಣ ಆಚಾರ್ ಕಾರ್ಯಕ್ರಮ ನಿರೂಪಿಸಿ ಕ್ರಷ್ಣ ಪೂಜಾರಿ ವಂದಿಸಿದರು.

Click Here

LEAVE A REPLY

Please enter your comment!
Please enter your name here